Home ಟಾಪ್ ಸುದ್ದಿಗಳು ನಾನು ಅಧಿಕಾರಕ್ಕಾಗಿ ವಲಸೆ ಬಂದ ಪ್ರಾಣಿಯಲ್ಲ: ಬಿಕೆ ಹರಿಪ್ರಸಾದ್

ನಾನು ಅಧಿಕಾರಕ್ಕಾಗಿ ವಲಸೆ ಬಂದ ಪ್ರಾಣಿಯಲ್ಲ: ಬಿಕೆ ಹರಿಪ್ರಸಾದ್

ಬೆಂಗಳೂರು: ರಾಮ ಮಂದಿರ ಉದ್ಘಾಟನೆಯ ಅಂಗವಾಗಿ ‘ಗೋದ್ರಾ ಹತ್ಯಾಕಾಂಡ ಘಟನೆ ರೀತಿ ನಡೆಯಬಹುದು ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಕೆಲವು ದಿನಗಳ ಹಿಂದೆ ನೀಡಿದ್ದ ಹೇಳಿಕೆ ಕುರಿತಂತೆ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.ಈ ವಿಷಯಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರಕ್ಕೆ ಬಂದ ವಲಸೆಪ್ರಾಣಿ ಅಲ್ಲ ಎಂದಿದ್ದಾರೆ. ಇದು ಸಿಎಂ ವಿರುದ್ಧದ ಪರೋಕ್ಷ ವಾಗ್ದಾಳಿಯಾಗಿದೆ ಎಂದು ಹೇಳಲಾಗುತ್ತಿದೆ.ಅಧಿಕಾರಕ್ಕಾಗಿ ನಾನು ಪಕ್ಷಗ ಬದಲಾವಣೆ ಮಾಡುವುದಿಲ್ಲ ಎಂದೂ ಅವರು ಸಿದ್ದರಾಮಯ್ಯರಿಗೆ ತಿವಿದಿದ್ದಾರೆ.

ಕೆಲವರು ಕಾಂಗ್ರೆಸ್ ನಮ್ಮದು ಅಂತಿದ್ದಾರೆ. ಅದಕ್ಕೆ ನಮ್ಮ ಅಸಮಾಧಾನವಿದೆ. ಯಾವುದು ಸಮಾಧಾನ ಅಸಮಾಧಾನ ಅಂತ ತಿಳಿದವರಿಗೆ ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ಹೊರಹಕಿದ್ದಾರೆ.

Join Whatsapp
Exit mobile version