Home ಟಾಪ್ ಸುದ್ದಿಗಳು ನಾನು ಆರೋಪ ಮುಕ್ತ, ಸಿಎಂ ಆಪಾದಿತರು: ಆರ್.ಅಶೋಕ್

ನಾನು ಆರೋಪ ಮುಕ್ತ, ಸಿಎಂ ಆಪಾದಿತರು: ಆರ್.ಅಶೋಕ್

ಬೆಂಗಳೂರು: ‘ನಾನು ಆರೋಪ ಮುಕ್ತ. ನ್ಯಾಯಾಲಯ ಮತ್ತು ಜನಪ್ರತಿನಿಧಿ ನ್ಯಾಯಾಲಯವೂ ನಿರ್ದೋಷಿ ಎಂದಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪದಿಂದ ಮುಕ್ತರಾಗಿಲ್ಲ. ಅವರು ತನಿಖೆ ಎದುರಿಸಬೇಕಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಭೂ ಕಬಳಿಕೆದಾರ ಎಂದು ಕರೆದಿರುವ ಕಾಂಗ್ರೆಸ್ನ ನಾಲ್ವರು ಸಚಿವರು ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಅವರು ನ್ಯಾಯಾಲಯದ ತೀರ್ಪನ್ನು ಮುಚ್ಚಿಟ್ಟು, ಸುಳ್ಳುಗಳನ್ನು ಹೇಳುವ ಮೂಲಕ ದೊಡ್ಡವರಾಗಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು.


‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಅರಿಶಿನ– ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ, ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೆ. ಈ ಪ್ರಕರಣದ ಬಗ್ಗೆ ಆರೋಪ ಬಂದಾಗ ಯುಪಿಎ ಸರ್ಕಾರ ನೇಮಿಸಿದ್ದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಇದ್ದರು. ಅವರು ಕೂಡ ಈ ಪ್ರಕರಣವನ್ನು ತನಿಖೆಗೆ ವಹಿಸಲಿಲ್ಲ’ ಎಂದು ಅಶೋಕ ಹೇಳಿದರು.

Join Whatsapp
Exit mobile version