Home ಟಾಪ್ ಸುದ್ದಿಗಳು ಹೈದರಾಬಾದ್: ವೇದಿಕೆಯಲ್ಲಿ ಮಾತನಾಡುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿಯ ಮೈಕ್ ಎಳೆದಾಡಿದ ವ್ಯಕ್ತಿ

ಹೈದರಾಬಾದ್: ವೇದಿಕೆಯಲ್ಲಿ ಮಾತನಾಡುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿಯ ಮೈಕ್ ಎಳೆದಾಡಿದ ವ್ಯಕ್ತಿ

ತೆಲಂಗಾಣ: ರ್ಯಾಲಿಯೊಂದನ್ನು ಉದ್ದೇಶಿಸಿ ವೇದಿಕೆಯಲ್ಲಿ ಮಾತನಾಡುತ್ತಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಸರ್ಮಾ ಅವರ ಬಳಿ ಬಂದ ವ್ಯಕ್ತಿಯೋರ್ವ ಅವರ ಮೈಕ್‌ ಅನ್ನು ಕಿತ್ತುಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಗಣೇಶ ವಿಸರ್ಜನಾ ಶೋಭಯಾತ್ರೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಸರ್ಮಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಶೋಭಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ಆಗಮಿಸಿದ ವ್ಯಕ್ತಿಯೊಬ್ಬ ಅವರಿಂದ ಮೈಕ್ ಎಳೆದಿದ್ದು, ಆ ಬಳಿಕ ಅವರತ್ತ ಕಣ್ಣು ಹಾಯಿಸಿ ಮಾತಿನ ಚಕಮಕಿ ನಡೆಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.

ಮೈಕ್ ಕಿತ್ತುಕೊಳ್ಳಲು ಆಗಮಿಸಿದ ವ್ಯಕ್ತಿಯು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಕೆಸಿಆರ್ ಪಕ್ಷದ ಬಣ್ಣ ಮೆಜೆಂಟಾ ಶಾಲನ್ನು ಧರಿಸಿದ್ದರು. ಕೂಡಲೇ ಈ ವ್ಯಕ್ತಿಯನ್ನು ವೇದಿಕೆಯಲ್ಲಿ ಇದ್ದವರು ಬದಿಗೆ ಸರಿಸಿ ವೇದಿಕೆಯಿಂದ ಕೆಳಗಿಳಿಸಿದ್ದಾರೆ.

ಪ್ರತೀ ವರ್ಷ ಗಣೇಶ ಚತುರ್ಥಿಯ ಆಚರಣೆಗೆ ನಾವು ಅತಿಥಿಗಳಿಗೆ ಆಹ್ವಾನ ನೀಡ್ತೇವೆ‌. ಅದರಂತೆ ಈ ಬಾರಿ ಅಸ್ಸಾಂ ಸಿಎಂ ಹೇಮಂತ ಬಿಸ್ವ ಸರ್ಮಾ ಅವರನ್ನು ಆಹ್ವಾನಿಸಿದ್ದೇವೆ. ಜೊತೆಗೆ ಧರ್ಮಾಚಾರ್ಯ ಉಡುಪಿ ಪೇಜಾವರ ಸ್ವಾಮಿಗಳಿಗೂ ಆಹ್ವಾನ ನೀಡಿದ್ದೇವೆ ಎಂದು ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಗವಂತ್ ರಾವ್ ಹೇಳಿದ್ದಾರೆ.

Join Whatsapp
Exit mobile version