ಸಾವಿನಲ್ಲೂ ಒಂದಾದ ದಂಪತಿ | ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ನಿಧನ

Prasthutha|

ಚಿಕ್ಕಮಗಳೂರು : ಇಲ್ಲಿನ ಕಳಸಾಪುರ ಸಮೀಪದ ಗಾಡಿಹಳ್ಳಿಯಲ್ಲಿ ಹಿರಿಯ ದಂಪತಿಗಳು ಸಾವಿನಲ್ಲೂ ಒಂದಾದ ಘಟನೆ ನಡೆದಿದೆ. ಗ್ರಾಮದ ದೊಡ್ಡ ರಾಜಣ್ಣ ಎನ್ನುವವರಿಗೆ ಗುರುವಾರ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

- Advertisement -

ಆದರೆ, ಪರಿಶೀಲನೆ ಮಾಡಿದಾಗ ದೊಡ್ಡ ರಾಜಣ್ಣ ಸಾವಿಗೀಡಾಗಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಇದೇ ವೇಳೆ ದೊಡ್ಡರಾಜಣ್ಣ ಅವರ ಪತ್ನಿ ರುದ್ರಮ್ಮಗೂ ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಹೃದಯಾಘಾತವಾಗಿ, ಕೊನೆಯುಸಿರೆಳೆದಿದ್ದಾರೆ. ಕುಟುಂಬದಲ್ಲಿ ಈಗ ದುಃಖದ ವಾತಾವರಣ ಸೃಷ್ಟಿಯಾಗಿದೆ.   

Join Whatsapp