Home ಕರಾವಳಿ ಜೂನ್ 20ರಂದು ಕಲಬುರ್ಗಿಯಲ್ಲಿ ಉಪವಾಸ ಸತ್ಯಾಗ್ರಹ: ಬಿಲ್ಲವ ಮುಖಂಡರನ್ನು ಭೇಟಿ ಮಾಡಿದ ಪ್ರಣವಾನಂದ ಸ್ವಾಮೀಜಿ

ಜೂನ್ 20ರಂದು ಕಲಬುರ್ಗಿಯಲ್ಲಿ ಉಪವಾಸ ಸತ್ಯಾಗ್ರಹ: ಬಿಲ್ಲವ ಮುಖಂಡರನ್ನು ಭೇಟಿ ಮಾಡಿದ ಪ್ರಣವಾನಂದ ಸ್ವಾಮೀಜಿ

ಮಂಗಳೂರು: ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಕೇಂದ್ರ ಸಮಿತಿಯಿಂದ  ಜೂನ್ 20ರಂದು ಕಲಬುರ್ಗಿಯಲ್ಲಿ  ಆಯೋಜಿಸಲಾಗಿರುವ ಅಮರಣಾಂತರ ಉಪವಾಸ ಹೋರಾಟಕ್ಕೆ ಮುನ್ನ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣ ದೇವಸ್ಥಾನಕ್ಕೆ ಶುಕ್ರವಾರ ಪ್ರಣವಾನಂದ ಸ್ವಾಮೀಜಿ ಸಂದರ್ಶನ ಮಾಡಿ ಪ್ರಾರ್ಥನೆ ಮಾಡಿದರು.

ಬ್ರಹ್ಮ ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ  ದೇವಸ್ಥಾನವಾಗಿದೆ. ಇದಕ್ಕೂ ಮುನ್ನ ಪ್ರಣವಾನಂದ ಸ್ವಾಮೀಜಿ  ಮಂಗಳೂರಿನಲ್ಲಿ ಬಿಲ್ಲವ ಮುಖಂಡರನ್ನು ಭೇಟಿ ಮಾಡಿ ಹೋರಾಟದ ಕುರಿತಾಗಿ ಮಾತುಕತೆ ನಡೆಸಿದರು.

ಈಡಿಗ-ಬಿಲ್ಲವ ಜಾತಿಯ 26 ಪಂಗಡಗಳಿಗಾಗಿ ಪ್ರತ್ಯೇಕವಾಗಿ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ, ಕರಾವಳಿಯಲ್ಲಿ ಇರುವಂತೆ ಕಲ್ಯಾಣ ಕರ್ನಾಟಕದಲ್ಲಿ ಕೂಡ ನಮ್ಮ ಕಸುಬು, ನಮ್ಮ ಕಸುಬು ಆಗಿದ್ದು ಸೇಂದಿ ಇಳಿಸುವ ಹಕ್ಕು ನೀಡಬೇಕು ಎಂದು ಆಗ್ರಹಿಸಿ  ಹೋರಾಟ ಹಮ್ಮಿಕೊಳ್ಳಲಾಗಿದೆ.

Join Whatsapp
Exit mobile version