Home ಟಾಪ್ ಸುದ್ದಿಗಳು ಹುಬ್ಬಳ್ಳಿ: ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಓಡಿ ಬಂದಿದ್ದ ಯುವಕನಿಗೆ ‘ಹಿಂದೂ ಪರ’ ಯುವಕರಿಂದ ಧರ್ಮದೇಟು

ಹುಬ್ಬಳ್ಳಿ: ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಓಡಿ ಬಂದಿದ್ದ ಯುವಕನಿಗೆ ‘ಹಿಂದೂ ಪರ’ ಯುವಕರಿಂದ ಧರ್ಮದೇಟು

ಹುಬ್ಬಳ್ಳಿ: ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಬೂದಿ ಮುಚ್ಚಿದ ಕೆಂಡಂತಿರುವಾಗಲೇ ಅಹಿತಕರ ಘಟನೆ ನಡೆದಿದೆ. ಪ್ರೀತಿಗೆ ಬಿದ್ದು ಬಾಲಕಿಯೊಂದಿಗೆ ಓಡಿ ಬಂದಿದ್ದ ಯುವಕನಿಗೆ ‘ಹಿಂದೂ ಪರ’ ಸಂಘಟನೆಯವರು ಎನ್ನಲಾದ ಯುವಕರು ಧರ್ಮದೇಟು ನೀಡಿದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಬಗ್ಗೆ ಕೇಸ್ ದಾಖಲಾಗಿತ್ತು. ಜೋಡಿಯನ್ನು ಪತ್ತೆ ಹಚ್ವಿ, ಅವರಿಗೆ ಧರ್ಮದೇಟು ನೀಡಿದ ಹಿಂದೂ ಜಾಗರಣಾ ವೇದಿಕೆ ಮುಖಂಡರು, ಜೋಡಿಯನ್ನು ಪೊಲೀಸ್ ಠಾಣೆಗೆ ಕರೆತಂದು, ಠಾಣೆಯಲ್ಲೇ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಸದ್ಯ ಜೋಡಿ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಒಂದು ಹುಡುಗಿಗಾದ ಅನ್ಯಾಯವನ್ನು ಧರ್ಮದ ಲೇಬಲ್‌ನಲ್ಲಿ ಪ್ರಚಾರ ಮಾಡುತ್ತಿರುವ ಕೋಮುವಾದಿ ಸಂಘಟನೆಯವರ ತೀವ್ರ ಆಕ್ರೋಶದ ವೇಳೆಯೇ ಯುವಕನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ಸಿಕ್ಜಿಬಿದ್ದಿರುವುದು, ಯುವಕನಿಗೆ ಧರ್ಮದೇಟು ಸಿಕ್ಕಿದೆ. ಪೊಲೀಸರು ತನಿಖೆನಡೆಸುತ್ತಿದ್ದಾರೆ.

Join Whatsapp
Exit mobile version