Home ಟಾಪ್ ಸುದ್ದಿಗಳು ನಿಮ್ಮ ಎಷ್ಟು ಮಕ್ಕಳನ್ನು ಅಗ್ನಿಪಥ್’ಗೆ ಕಳುಹಿಸುತ್ತೀರಿ: ಬಿಜೆಪಿಗೆ ಅಖಿಲೇಶ್ ಪ್ರಶ್ನೆ !

ನಿಮ್ಮ ಎಷ್ಟು ಮಕ್ಕಳನ್ನು ಅಗ್ನಿಪಥ್’ಗೆ ಕಳುಹಿಸುತ್ತೀರಿ: ಬಿಜೆಪಿಗೆ ಅಖಿಲೇಶ್ ಪ್ರಶ್ನೆ !

ಲಕ್ನೋ: ಅಗ್ನಿಪಥ್ ಯೋಜನೆ ಜಾರಿಗೆ ತಂದಿರುವ ಕೇಂದ್ರ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಗರೇ ನಿಮ್ಮ ಎಷ್ಟು ಮಂದಿ ಮಕ್ಕಳನ್ನು ಅಗ್ನಿಪಥ್ ಗೆ ಕಳುಹಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಅಖಿಲೇಶ್, ಈ ಯೋಜನೆಯು ಯುವಕರಿಗೆ ಮಾಡಿರುವ ಅವಮಾನವಾಗಿದ್ದು, ಇದರ ಪ್ರಯೋಜನವನ್ನು ಎಣಿಸುವ ಬದಲು ಬಿಜೆಪಿಯು ಈ ಯೋಜನೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ತನ್ನ ಸದಸ್ಯರ-ಬೆಂಬಲಿಗರ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.

ಯೋಜನೆಯ ಹೆಸರಿನಲ್ಲಿ ಪ್ರವಚನ ಮಾಡುವುದಕ್ಕಿಂತ ಬಿಜೆಪಿಗೆ ಮಾದರಿಯಾಗುವುದು ಒಳ್ಳೆಯದು. ಅಲ್ಲದೇ ಬಿಜೆಪಿಯು ಯುವಕರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು’ ಎಂದು ಕಿಡಿಕಾರಿದ್ದಾರೆ.

Join Whatsapp
Exit mobile version