Home ಟಾಪ್ ಸುದ್ದಿಗಳು ಮಂಗಳೂರು ಡಿವೈಎಸ್ ಪಿ ಪರಮೇಶ್ವರ್ ಸೇರಿ ಆರು ಮಂದಿ ಅಧಿಕಾರಿಗಳಿಗೆ ಗೃಹ ಸಚಿವರ ಪದಕ

ಮಂಗಳೂರು ಡಿವೈಎಸ್ ಪಿ ಪರಮೇಶ್ವರ್ ಸೇರಿ ಆರು ಮಂದಿ ಅಧಿಕಾರಿಗಳಿಗೆ ಗೃಹ ಸಚಿವರ ಪದಕ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ತನಿಖೆಗಾಗಿ 2021ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕಕ್ಕೆ ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.


ಮಂಗಳೂರು ಉಪ ವಿಭಾಗದ ಡಿವೈಎಸ್ ಪಿ ಪರಮೇಶ್ವರ್ ಅನಂತ್ ಹೆಗ್ಡೆ, ಬೆಂಗಳೂರು ಸಿಸಿಬಿಯ ಎಸಿಪಿ ಎಚ್.ಎನ್. ಧರ್ಮೇಂದ್ರ, ಬೆಂಗಳೂರು ಬಿಡಿಎ ಎಸ್ ಟಿಎಫ್ ನ ಡಿವೈಎಸ್ ಪಿ ಬಾಲಕೃಷ್ಣ ಸಿ, ಬೆಂಗಳೂರು ಕೆಎಲ್ ಎ ಸಿಟ್ ನ ಪೊಲೀಸ್ ಇನ್ಸ್ ಪೆಕ್ಟರ್ ಮನೋಜ್ ಎನ್. ಹೊವಲೆ, ದಾವಣಗೆರೆ ಹೊನ್ನಾಳಿ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಟಿ.ವಿ., ಹುಬ್ಬಳ್ಳಿ ಹಳೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ಪ ಸೆಟ್ಟಪ್ಪ ಕಮಟಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Join Whatsapp
Exit mobile version