Home ಟಾಪ್ ಸುದ್ದಿಗಳು ಮತಾಂತರ ಆರೋಪ| ಪಾದ್ರಿ ಸೇರಿದಂತೆ 200 ಜನರನ್ನು ಕೂಡಿ ಹಾಕಿದ ಶ್ರೀರಾಮ ಸೇನೆಯ ಕಾರ್ಯಕರ್ತರು

ಮತಾಂತರ ಆರೋಪ| ಪಾದ್ರಿ ಸೇರಿದಂತೆ 200 ಜನರನ್ನು ಕೂಡಿ ಹಾಕಿದ ಶ್ರೀರಾಮ ಸೇನೆಯ ಕಾರ್ಯಕರ್ತರು

ಬೆಳಗಾವಿ: ಬಲವಂತದ ಮತಾಂತರ ಆರೋಪದಲ್ಲಿ ಪಾದ್ರಿಯೊಬ್ಬರನ್ನು ಸಂಘಪರಿವಾರದ ಕಾರ್ಯಕರ್ತರು ಕೂಡಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಮರಾಠಾ ಕಾಲೋನಿಯಲ್ಲಿ ನಡೆದಿದೆ.


ಸಮುದಾಯ ಭವನದಲ್ಲಿ ಸಾಮೂಹಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾಗಿದೆ.
ಸಾಮೂಹಿಕ ಪ್ರಾರ್ಥನೆಯ ನಡೆಸುತ್ತಿದ್ದ ಪಾದ್ರಿ ಸೇರಿದಂತೆ ಗ್ರಾಮೀಣ ಹಿನ್ನೆಲೆಯ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 200 ಜನರನ್ನು ಕಟ್ಟಡವೊಂದರಲ್ಲಿ ಕೂಡಿ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಾರ್ಥನೆ ನಡೆಸುತ್ತಿದ್ದವರನ್ನು ಕೂಡಿ ಹಾಕಿದ್ದ ಶ್ರೀ ರಾಮ ಸೇನೆಯ ಕಾರ್ಯಕರ್ತರು ಪೊಲೀಸರು ಬಂದ ನಂತರವೇ ಬಿಡುಗಡೆಗೊಳಿಸಿದ್ದಾರೆ. ಈ ನಡುವೆ ಪ್ರಾರ್ಥನೆಗೆ ನೇತೃತ್ವ ನೀಡಿದ್ದ ಪಾದ್ರಿ ವಿರುದ್ಧ FIR ದಾಖಲಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ತ್ಯಾಗರಾಜನ್ ತಿಳಿಸಿದ್ದಾರೆ.

Join Whatsapp
Exit mobile version