ಕಾರ್ಕಳ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನಿಗೆ ಭಜರಂಗದಳದವರಿಂದ ಹಲ್ಲೆ

Prasthutha|

- Advertisement -

ಕಾರ್ಕಳ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನಿಗೆ ಭಜರಂಗ ದಳದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಭಜರಂಗ ದಳದ ಕಾರ್ಯಕರ್ತರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ನಿಟ್ಟೆ ಗ್ರಾಮದ ಅನಿಲ್‌ ಪೂಜಾರಿ    ಅವರ ಮನೆಗೆ ನುಗ್ಗಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ದಾಂಧಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಅನಿಲ್ ಪೂಜಾರಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಲ್ಲೆ ನಡೆಸಿದವರನ್ನು ಭಜರಂಗ ದಳದ ಕಾರ್ಯಕರ್ತರಾದ ನಿಟ್ಟೆ ಗ್ರಾಮದ ಜಗದೀಶ್‌, ಸುಧೀರ್‌, ಶರತ್‌, ಸುನಿಲ್‌,ಪ್ರಸಾದ್‌ ಎಂದು ಗುರುತಿಸಲಾಗಿದೆ. ದಾಂಧಲೆ ನಡೆಸುತ್ತಿದ್ದ ಸಂದರ್ಭ ಅಡ್ಡ ಬಂದ ಅನಿಲ್ ಪೂಜಾರಿಯ ತಾಯಿಯನ್ನೂ ದುಷ್ಕರ್ಮಿಗಳು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ತಾಯಿಯನ್ನೂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ದೂರು ದಾಖಲಾಗಿದೆ.

- Advertisement -

ಅನಿಲ್‌ ಪೂಜಾರಿ ಅವರು ಭಜರಂಗದಳ ಬಿಟ್ಟು ಜಾಗರಣೆ ವೇದಿಕೆಗೆ ಸೇರ್ಪಡೆಯಾಗಿರುವುದೇ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಹಲ್ಲೆಗೆ ಸಂಬಧಿಸಿ ಅನಿಲ್‌ ಪೂಜಾರಿ ಮೇಲೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

.

Join Whatsapp