Home ಟಾಪ್ ಸುದ್ದಿಗಳು ‘ಹಿಜಾಬಿ ಮುಸ್ಕಾನ್’ : ಮಂಡ್ಯದ ಮಗಳಿಗೆ ಸಾಥ್ ನೀಡಿದ ಕತಾರ್ ಸುಗಂಧ ದ್ರವ್ಯ ಕಂಪನಿ

‘ಹಿಜಾಬಿ ಮುಸ್ಕಾನ್’ : ಮಂಡ್ಯದ ಮಗಳಿಗೆ ಸಾಥ್ ನೀಡಿದ ಕತಾರ್ ಸುಗಂಧ ದ್ರವ್ಯ ಕಂಪನಿ

ದೋಹಾ: ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಕತಾರ್ ನ ರಬ್ಬಾನಿ ಸುಗಂಧ ದ್ರವ್ಯ ಕಂಪನಿಯು ಬೆಂಬಲ ವ್ಯಕ್ತಪಡಿಸಿದೆ. ತಮ್ಮ ಕಂಪೆನಿಯ ಹೊಸ ಸುಗಂಧ ದ್ರವ್ಯ ಉತ್ಪನ್ನವನ್ನು ಕೇಸರಿ ಕಿರಾತಕರ ಮುಂದೆ ಕೆಚ್ಚೆದೆಯಿಂದ  ಅಲ್ಲಾಹು ಅಕ್ಬರ್ ಎಂದು ಕೂಗಿದ ಮಂಡ್ಯದ  ಮುಸ್ಕಾನ್ ಖಾನ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ.

ಇದು ಕೇರಳ ಮೂಲದವರ ಮಾಲಕತ್ವದಲ್ಲಿ ಕತಾರ್ ನ  ದೋಹಾ ವನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿರುವ ಕಂಪೆನಿಯಾಗಿದ್ದು  ‘ಹಿಜಾಬಿ ಮುಸ್ಕಾನ್’  ಎಂಬ ಹೆಸರಿನಲ್ಲಿ ಸುಗಂಧ ದ್ರವ್ಯವನ್ನು ಹೊರ ತಂದಿದೆ.

“ಕೇಸರಿ  ರಾಜಕೀಯವನ್ನು ಸುಗಂಧದ ಮೂಲಕ ವಿರೋಧಿಸುವುದೇ ರಬ್ಬಾನಿ ಪರ್ಫ್ಯೂಮ್ಸ್ ನ ಧ್ಯೇಯವಾಗಿದ್ದು, ವ್ಯವಹಾರಗಳೆಲ್ಲವೂ ಅದರ ಬಳಿಕ”  ಎಂದು ಕಂಪನಿ ಹೇಳಿದೆ.

ಲಕ್ಷದ್ವೀಪದಲ್ಲಿ ಜಾರಿಗೆ ತರಲಾದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಲಕ್ಷದ್ವೀಪದ ಜನರಿಗೆ ಬೆಂಬಲವಾಗಿ ಕಂಪನಿಯು ಈ ಹಿಂದೆಯೂ  ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿತ್ತು.

Join Whatsapp
Exit mobile version