ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆಯ ಹಾವಳಿ: 100ಕ್ಕೂ ಅಧಿಕ ಮಂದಿ ನಾಪತ್ತೆ

Prasthutha|

ಮುಂಬೈ, ಜು.26: ಮಹಾರಾಷ್ಟ್ರದ ಎಲ್ಲೆಡೆ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಸಾವಿಗೀಡಾದವರ ಸಂಖ್ಯೆಯು 149ಕ್ಕೆ ಏರಿಕೆಯಾಗಿದ್ದು, 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದು ಸರಕಾರದ ನಿದ್ದೆ ಕೆಡಿಸಿದೆ.

- Advertisement -


ಸುಮಾರು ಹತ್ತು ಸಾವಿರದಷ್ಟು ಜನರನ್ನು ಸ್ಥಳಾಂತರ ಮಾಡಲಾಗಿದೆ. ಕಾಣೆಯಾದವರ ಹುಡುಕಾಟ ನಡೆಸುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಂದು ಕೂಡ ರತ್ನಗಿರಿ, ರಾಯಗಡ, ಮುಂಬಯಿ ಪ್ರದೇಶದಲ್ಲಿ ಮಳೆ ನೆರೆ ಸಮಸ್ಯೆ ಮುಂದುವರಿದಿದೆ.


ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟಿರುವುದರಿಂದ ಮುಖ್ಯವಾಗಿ ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಹಲವು ಕಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ

Join Whatsapp