Home ಕರಾವಳಿ ತೆಂಗಿನಕಾಯಿ ಕೀಳುವ ವೇಳೆ ಹೃದಯಾಘಾತ| ಮರದಿಂದ ಬಿದ್ದು ಕಾರ್ಮಿಕ ಮೃತ್ಯು

ತೆಂಗಿನಕಾಯಿ ಕೀಳುವ ವೇಳೆ ಹೃದಯಾಘಾತ| ಮರದಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಸರಗೋಡು: ತೆಂಗಿನಕಾಯಿ ಕೀಳುವ ವೇಳೆ ಹೃದಯಾಘಾತವಾಗಿ ಮರದಿಂದ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಉಳ್ಳಾಲ ತಾಲೂಕಿನ ಮುಡಿಪು ಸಮೀದ ಮಂಚಿ ಮೂಲದ ಪ್ರಸ್ತುತ ಕೇರಳದ ಬಂದಿಯೋಡಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಹಮೀದ್ (52) ಎಂದು ಗುರುತಿಸಲಾಗಿದೆ.

ಹಮೀದ್ ಅವರು ಇಚ್ಚಿಲಂಗೋಡ್‌ನ ವ್ಯಕ್ತಿಯೊಬ್ಬರ ಹೊಲದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಹೃದಯಾಘಾತವಾಗಿ ತೆಂಗಿನ ಮರದಿಂದ ಬಿದ್ದಿದ್ದಾರೆ.

ತಕ್ಷಣ ಅವರನ್ನು ಬಂದಿಯೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅವರು ಪತ್ನಿ ಖದೀಜಾ, ಮಕ್ಕಳಾದ ಹುನೈಶಿ, ಉಮೀರಾ, ಹುಬೈದ್, ಹುಝೈಫ್ ಹುದಾ ಮತ್ತು ಅಝ್ಮಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Join Whatsapp
Exit mobile version