Home ಟಾಪ್ ಸುದ್ದಿಗಳು ಆಕ್ಸಿಜನ್ ಕೊಡದೇ 36 ಜನರನ್ನು ಕೊಲೆ ಮಾಡಿದ್ದಾರೆ: ಸುಧಾಕರ್ ವಿರುದ್ಧ ಡಿಕೆಶಿ ಗಂಭೀರ ಆರೋಪ

ಆಕ್ಸಿಜನ್ ಕೊಡದೇ 36 ಜನರನ್ನು ಕೊಲೆ ಮಾಡಿದ್ದಾರೆ: ಸುಧಾಕರ್ ವಿರುದ್ಧ ಡಿಕೆಶಿ ಗಂಭೀರ ಆರೋಪ

ಚಾಮರಾಜನಗರ: ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊಡದೇ 36 ಜನರನ್ನ ಕೊಲೆ ಮಾಡಿದ್ದಾರೆ. ಇದಕ್ಕೆ ಸಚಿವ ಕೆ. ಸುಧಾಕರ್ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.


ಪ್ರಜಾಧ್ವನಿ ಯಾತ್ರೆ ಭಾಗವಾಗಿ ಚಾಮರಾಜನಗರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಸಚಿವ ಸುಧಾಕರ್ ಆಕ್ಸಿಜನ್ ಕೊಡದೇ 36 ಜನರನ್ನ ಕೊಲೆ ಮಾಡಿದ್ದಾರೆ. 3 ಜನ ಮಾತ್ರ ಮೃತಪಟ್ಟಿದ್ದಾಗಿ, ಆ ಮಂತ್ರಿ ಹೇಳಿದ್ದ. ನಾವೆಲ್ಲ ಬಂದು ಮೃತರ ಕುಟುಂಬಸ್ಥರನ್ನು ಭೇಟಿಯಾದೆವು. ಸಿದ್ದರಾಮಯ್ಯ ಅವರು ಕೇಳಿದಾಗ ಅಧಿಕಾರಿಗಳು 36 ಜನ ಸತ್ತಿರುವುದನ್ನ ದೃಢಪಡಿಸಿದರು. ಆದರೆ ಯಾವ ಮಂತ್ರಿಯೂ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಆಗಲೇ ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಅಂತ ಗೊತ್ತಾಯಿತು. ನಾವು ಸಂತ್ರಸ್ತರ ಮನೆಗೆ ಹೋಗಿ 1 ಲಕ್ಷ ರೂಪಾಯಿ ಕೊಟ್ಟೆವು. ಈ ಬಾರಿ ನಮ್ಮ ಸರ್ಕಾರ ಬಂದರೆ ಕೋವಿಡ್ ನಿಂದ ಮೃತಪಟ್ಟ 36 ಕುಟುಂಬಗಳಲ್ಲಿ ತಲಾ ಒಬ್ಬರಿಗೆ ಸರ್ಕಾರಿ ಕೆಲಸ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Join Whatsapp
Exit mobile version