Home ಟಾಪ್ ಸುದ್ದಿಗಳು ನಾನೀಗ ಸೆಂಟ್ರಲ್ ಮಿನಿಸ್ಟರ್, ದರ್ಶನ್ ಬಗ್ಗೆ ಚರ್ಚೆ ಮಾಡಲ್ಲ: ಕುಮಾರಸ್ವಾಮಿ

ನಾನೀಗ ಸೆಂಟ್ರಲ್ ಮಿನಿಸ್ಟರ್, ದರ್ಶನ್ ಬಗ್ಗೆ ಚರ್ಚೆ ಮಾಡಲ್ಲ: ಕುಮಾರಸ್ವಾಮಿ

ಹುಬ್ಬಳ್ಳಿ: ನಾನು ಕೇಂದ್ರ ಸಚಿವನಾಗಿ ದರ್ಶನ ಕೇಸ್ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಕಾನೂನು ವ್ಯಾಪ್ತಿಯಲ್ಲಿ ಯಾರು ಕೂಡ ದೊಡ್ಡವರಲ್ಲ. ಕಾನೂನು ಬಾಹಿರ ಕೃತ್ಯಗಳಿಗೆ ಕಾನೂನು ರೀತಿಯಲ್ಲಿ ಕ್ರಮವನ್ನು ಜರುಗಿಸಬೇಕು ಎಂದು ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಸರ್ಕಾರ ನಂಬಿಕೆ‌ ಇಟ್ಟು ಎರಡು ಪ್ರಮುಖ ಖಾತೆ ಕೊಟ್ಟಿದ್ದಾರೆ. ನಾನು ಕೇಂದ್ರದಲ್ಲಿ ಪ್ರಥಮವಾಗಿ ಸಚಿವನಾಗಿದ್ದೇನೆ.‌ ಜಿಡಿಪಿ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ಶ್ರಮಿಸುತ್ತೇನೆ. ಎಲ್ಲರಿಗೂ ಹುಟ್ಟಿದಾಗಲೇ ತಿಳವಳಿಕೆ ಇರುವುದಿಲ್ಲ. ಖಾತೆಯ ಬಗ್ಗೆ ಹಾಗೂ ಜವಾಬ್ದಾರಿ ನಿರ್ವಹಣೆ ಬಗ್ಗೆ ಮತ್ತಷ್ಟು ತಿಳಿದಿಕೊಂಡು ನಿಮ್ಮ ಮುಂದೆ ಬರುತ್ತೇನೆ ಎಂದರು.

Join Whatsapp
Exit mobile version