ಕನ್ನಡ ಹೆಸರಿನ ಗ್ರಾಮಗಳ ಮರುನಾಮಕರಣ ಮಾಡದಂತೆ ಕೇರಳ ಸಿಎಂಗೆ ಹೆಚ್‌ಡಿಕೆ ಪತ್ರ

Prasthutha|

ಮಂಜೇಶ್ವರದ ಕೆಲವು ಗ್ರಾಮದ ಹೆಸರುಗಳ ಮಲಯಾಳೀಕರಣ!

- Advertisement -

ಬೆಂಗಳೂರು: ಕನ್ನಡ ಹೆಸರುಗಳನ್ನು ಹೊಂದಿರುವ ಗ್ರಾಮಗಳನ್ನು ಮಲಯಾಳಂನಲ್ಲಿ ಮರುನಾಮಕರಣ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕೆಲವು ಗ್ರಾಮಗಳು ಕನ್ನಡ ಹೆಸರುಗಳನ್ನ ಹೊಂದಿದ್ದು, ‘ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಹಬಾಳ್ವೆಯ ಹೆಸರಿನಲ್ಲಿ’ ಮಲಯಾಳಂನಲ್ಲಿ ಮರುನಾಮಕರಣ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹೆಚ್‌ಡಿಕೆ ಪತ್ರ ಬರೆದಿದ್ದಾರೆ.

- Advertisement -

ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕೆಲವು ಗ್ರಾಮಗಳು ಕನ್ನಡ ಹೆಸರುಗಳನ್ನು ಹೊಂದಿದ್ದು, ಮಲಯಾಳಂನಲ್ಲಿ ಮರುನಾಮಕರಣ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

Join Whatsapp