Home ಟಾಪ್ ಸುದ್ದಿಗಳು ಹೆಚ್ ಡಿ ರೇವಣ್ಣ ಆಪ್ತ, ಉದ್ಯಮಿ ಹತ್ಯೆ ಪ್ರಕರಣ: 143 ಆರೋಪಿಗಳ ಬಂಧನ

ಹೆಚ್ ಡಿ ರೇವಣ್ಣ ಆಪ್ತ, ಉದ್ಯಮಿ ಹತ್ಯೆ ಪ್ರಕರಣ: 143 ಆರೋಪಿಗಳ ಬಂಧನ

ಹಾಸನ: ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಹತ್ಯೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.

ಕೃಷ್ಣೇಗೌಡರ ಹತ್ಯೆಗೆ ಸಂಬಂಧಿಸಿದಂತೆ ಏಳು ಮಂದಿ ಸುಪಾರಿ ಕಿಲ್ಲರ್ ಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೆ ಸುಪಾರಿ ನೀಡಿದ್ದ ಯೋಗಾನಂದ್, ಹತ್ಯೆಗೈದ ಮೈಸೂರು ಮೂಲದ ಧನಂಜಯ (21), ಹಾಸನ ತಾಲೂಕಿನ ಆಟೋ ಚಾಲಕ ಗುಡ್ಡೇನಹಳ್ಳಿಯ ಚಂದನ (20), ಚನ್ನರಾಯಪಟ್ಟಣ ತಾಲೂಕಿನ ಗೂರನಹಳ್ಳಿ ಗ್ರಾಮದ ಚೇತನ್ (22), ಬಾಗೂರು ಗ್ರಾಮದವರಾದ ಪ್ರದೀಪ (27), ಮಣಿಕಂಠ (27) ಬಂಧಿತ ಆರೋಪಿಗಳು.
ಈ ಹತ್ಯೆಯಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.

Join Whatsapp
Exit mobile version