ಹಿಜಾಬ್ ನಿಷೇಧ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

Prasthutha|

 ಬೆಂಗಳೂರು: ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಾಳೆಗೆ ಮುಂದೂಡಿದೆ.

- Advertisement -

ಸಿಡಿಸಿ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಸಜ್ಜನ್ ಪೂವಯ್ಯ. ಶಾಲೆಗಳು ಯುವ ಜನತೆಗೆ ಶಿಕ್ಷಣ ನೀಡುವ ಬಾಧ್ಯತೆ ಹೊಂದಿವೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಸಮಪರ್ಕವಾಗಿ ಬಳಸಿಕೊಂಡು ಸಾಧನೆ ಮಾಡಲು ಸಹಾಯ ಮಾಡುವುದು. ಅವರು ಸಾಮರಸ್ಯದಿಂದ ಬದುಕಲು ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ವೈವಿಧ್ಯಮಯ ಧರ್ಮಗಳ ಜನಾಂಗಗಳು ಮತ್ತು ಸಂಸ್ಕೃತಿಗಳನ್ನು ಉತ್ತೇಜಿಸಬೇಕು. ಸಿಡಿಸಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಕಾನೂನುಗಳಿವೆ.

ಕ್ಷೇತ್ರಗಳ ಪುರಸಭೆ ಅಧ್ಯಕ್ಷರಾದವರು ಸಿಡಿಸಿಯ ಉಪಾಧ್ಯಕ್ಷರಾಗಿದ್ದು, ಎಸ್ಸಿ/ಎಸ್ಟಿ ಸಮುದಾಯದ ಪ್ರತಿನಿಧಿ, ಇಬ್ಬರು ವಿದ್ಯಾರ್ಥಿ ಪ್ರತಿನಿಧಿಗಳು, ಕಾಲೇಜಿನ ಉಪ ಪ್ರಾಂಶುಪಾಲರು ಸಮಿತಿಯಲ್ಲಿ ಇರುತ್ತಾರೆ ಎಂದು ಹೇಳಿದರು. ಶಿಕ್ಷಣ, ವಿಶೇಷವಾಗಿ ರಾಜ್ಯದಿಂದ ಬರುವ ಸಾರ್ವಜನಿಕ ಶಿಕ್ಷಣದ ರೂಪದಲ್ಲಿನ ಶಿಕ್ಷಣವು ಸಂಪೂರ್ಣವಾಗಿ ಜಾತ್ಯತೀತ ಚಟುವಟಿಕೆಯಾಗಿದೆ. ಮುಸ್ಲಿಮರಾಗುವ ಹಕ್ಕು ಸಂಪೂರ್ಣ ಹಕ್ಕು. ಆದರೆ ನಾನು ಶಾಲೆಗೆ, ಕಾಲೇಜಿಗೆ, ನ್ಯಾಯಾಲಯಕ್ಕೆ ನಿರ್ದಿಷ್ಟ ಉಡುಪನ್ನು ಧರಿಸಬೇಕು ಎಂದು ಹೇಳಲು ಸಾಧ್ಯವಿಲ್ಲ ಎಂದರು.

Join Whatsapp
Exit mobile version