ಮಸೀದಿಯಲ್ಲಿ ಹೋಮ ಮಾಡುತ್ತೇವೆ : ಸಾಧ್ವಿ ಪ್ರಾಚಿ

Prasthutha|

ಮೊರದಾಬಾದ್ : ಉತ್ತರ ಪ್ರದೇಶದ ಲಖನೌನ ಮಸೀದಿಯಲ್ಲಿ ಹೋಮ, ಹವನ ನಡೆಸಬೇಕು ಎಂದು ಬಿಜೆಪಿ ಪರ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ನಾಯಕಿ ಸಾಧ್ವಿ ಪ್ರಾಚಿ ಹೇಳಿದ ಬಗ್ಗೆ ವರದಿಯಾಗಿದೆ. ಆದರೆ, ವಿಷಯ ವಿವಾದಾತ್ಮಕವಾಗುತ್ತಿದ್ದಂತೆ, ಹೇಳಿಕೆಯನ್ನು ಅವರು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಇತ್ತೀಚೆಗೆ ಮಥುರಾದ ದೇವಸ್ಥಾನವೊಂದರಲ್ಲಿ ಸೌಹಾರ್ಧತೆಯ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತರೊಬ್ಬರು ನಮಾಜ್ ಮಾಡಿದ ಸುದ್ದಿ ಬಂದಿರುವ ಬೆನ್ನಲ್ಲೇ ಪ್ರಾಚಿ ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

“ಸಾಮಾಜಿಕ ಸೌಹಾರ್ಧತೆಯ ಹೆಸರಲ್ಲಿ, ಸಹೋದರತ್ವ ಗ್ಯಾಂಗ್ ಒಂದು ದೇವಸ್ಥಾನಗಳಿಗೆ ತೆರಳಿ, ನಮಾಜ್ ಸಲ್ಲಿಸುತ್ತದೆ. ನಾವು ಹಿಂದುಗಳು ಕೂಡ ಮಸೀದಿಗಳಲ್ಲಿ ಹೋಮ, ಹವನ ನಡೆಸಬೇಕು, ಆಗ ಸಾಮಾಜಿಕ ಸೌಹಾರ್ಧತೆ ಕಾಪಾಡಿದಂತಾಗುತ್ತದೆ’’ ಎಂದು ಪ್ರಾಚಿ ಹೇಳಿದ್ದರು.

- Advertisement -

ದೇವಸ್ಥಾನಗಳನ್ನು ಅಪವಿತ್ರಗೊಳಿಸಿ ಕಟ್ಟಲಾದ ಮಸೀದಿಗಳನ್ನು ಕೆಡವಬೇಕು ಮತ್ತು ಅಲ್ಲಿ ಹವನ ಮಾಡಬೇಕು ಎಂದು ಪ್ರಾಚಿ ಹೇಳಿರುವುದಾಗಿ ವರದಿಯಾಗಿದೆ.  

Join Whatsapp