Home ಟಾಪ್ ಸುದ್ದಿಗಳು ದ್ವೇಷ ಭಾಷಣ । ಕಾಳಿ ಚರಣ್ ಮಹಾರಾಜ್’ಗೆ ಹೈಕೋರ್ಟ್ ಜಾಮೀನು

ದ್ವೇಷ ಭಾಷಣ । ಕಾಳಿ ಚರಣ್ ಮಹಾರಾಜ್’ಗೆ ಹೈಕೋರ್ಟ್ ಜಾಮೀನು

ರಾಯ್ ಪುರ: ಮಹಾತ್ಮ ಗಾಂಧೀಜಿ ವಿರುದ್ಧದ ದ್ವೇಷ ಭಾಷಣ ಹಿನ್ನೆಲೆಯಲ್ಲಿ ಬಂಧಿತರಾದ ಕಾಳಿ ಚರಣ್ ಮಹಾರಾಜ್’ಗೆ ಛತ್ತೀಸ್ ಗಢ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅರವಿಂದ್ ಸಿಂಗ್ ಚಾಂದೆಲ್ ಅವರ ಏಕ ಸದಸ್ಯ ಪೀಠ, ಕಾಳಿ ಚರಣ್ ಮಹಾರಾಜ್’ಗೆ ಜಾಮೀನು ಮಂಜೂರು ಮಾಡಿದೆ ಎಂದು ಆರೋಪಿ ಪರ ವಕೀಲ ಕಿಶೋರ್ ಬದೌರಿ ತಿಳಿಸಿದ್ದಾರೆ.

ಈ ಮಧ್ಯೆ ಇಬ್ಬರು ಶ್ಯೂರಿಟಿ ಸೇರಿದಂತೆ ತಲಾ 50000 ರೂ. ದಂತೆ 1 ಲಕ್ಷ ಮೌಲ್ಯದ ಬಾಂಡ್ ಒದಗಿಸಿದ ಬಳಿಕ ಬಿಡುಗಡೆಗೊಳಿಸಲಾಗುವುದೆಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಸರ್ಕಾರದ ಪರ ವಕಾಲತ್ ವಹಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version