ದ್ವೇಷ ಭಾಷಣ| ಮಲಯಾಳಂ ನಟ ಸುರೇಶ್ ಗೋಪಿ ವಿರುದ್ಧ ದೂರು ದಾಖಲು

Prasthutha|

ಕೊಚ್ಚಿ: ಶಿವರಾತ್ರಿ ದಿನದಂದು ನಡೆದ ಕಾರ್ಯಕ್ರಮವೊಂದರಲ್ಲಿ ಅನ್ಯಧರ್ಮೀಯರ ವಿರುದ್ಧ ದ್ವೇಷ ಭಾಷಣ ಮಾಡಿದ ಮಲಯಾಳಂ ನಟ ಸುರೇಶ್ ಗೋಪಿ ವಿರುದ್ಧ ದೂರು ದಾಖಲಾಗಿದೆ.

- Advertisement -

 ಆಲಪ್ಪುಝ ನಿವಾಸಿ ಸುಭಾಷ್ ಎಂ ತೀಕಾಡನ್ ನಟನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. “ಅನ್ಯಧರ್ಮೀಯರ ವಿರುದ್ಧ ಗಲಭೆ ನಡೆಸುವಂತೆ ಸುರೇಶ್ ಗೋಪಿ ಕರೆ ನೀಡಿದ್ದಾರೆ. ಜನರ ನಡುವೆ ದ್ವೇಷ ಹರಡುವ ಭಾಷಣ ಮಾಡಿದ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಅಲುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಲಾಗಿದೆ.

ಆಲುವಾದಲ್ಲಿ ನಡೆದ ಶಿವರಾತ್ರಿಯ ಕಾರ್ಯಕ್ರಮವೊಂದರಲ್ಲಿ ನಟ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅನ್ಯ ಧರ್ಮೀಯರ ನಾಶಕ್ಕಾಗಿ ದೇಗುಲದ ಮುಂದೆ ಪ್ರಾರ್ಥಿಸುತ್ತೇನೆ. ತನಗೆ ಅನ್ಯ ಧರ್ಮೀಯರ ಮೇಲೆ ಪ್ರೀತಿ ಇಲ್ಲ, ಹಿಂದೂಗಳ ಹಕ್ಕುಗಳನ್ನು ಕಸಿಯುವವರ ನಾಶಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಸುರೇಶ್ ಗೋಪಿ ಹೇಳಿಕೆ ನೀಡಿದ್ದರು.



Join Whatsapp
Exit mobile version