Home ಟಾಪ್ ಸುದ್ದಿಗಳು ಹಾಸನ: ಆನೆ ದಾಳಿಗೆ ಮತ್ತೋರ್ವ ರೈತ ಮೃತ್ಯು

ಹಾಸನ: ಆನೆ ದಾಳಿಗೆ ಮತ್ತೋರ್ವ ರೈತ ಮೃತ್ಯು

ಹಾಸನ: ಆನೆಯೊಂದು ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಸಕಲೇಶಪುರ ತಾಲೂಕಿನ ಕೆಲಗಳಲೆಯಲ್ಲಿ ನಡೆದಿದೆ.


ಕೆಲಗಳಲೆ ಗ್ರಾಮದ ಕೃಷ್ಣೇಗೌಡ (55) ಮೃತಪಟ್ಟವರು. ಕೃಷ್ಣೇಗೌಡ ಇಂದು ಬೆಳಿಗ್ಗೆ ಗ್ರಾಮದ ಹೊರವಲಯದ ತೋಟದ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಮಿತಿ ಮೀರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

Join Whatsapp
Exit mobile version