ಕೇರಳದಾದ್ಯಂತ ಪಿಎಫ್ ಐ ಮೇಲಿನ ದಾಳಿ ಖಂಡಿಸಿ ಹರತಾಳ; ಜನ ಜೀವನ ಸಂಪೂರ್ಣ ಸ್ತಬ್ಧ

Prasthutha|

ತಿರುವನಂತಪುರಂ: ದೇಶಾದ್ಯಂತ ಗುರುವಾರ ಏಕಕಾಲಕ್ಕೆ ಪಿಎಫ್ ಐ ಸಂಘಟನೆಯನ್ನು ಗುರಿಯಾಗಿಸಿ , ಪಿಎಫ್ ಐ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, 100 ಕ್ಕೂ ಹೆಚ್ಚು ನಾಯಕರು ಬಂಧಿಸಲ್ಪಟ್ಟ ಹಿನ್ನೆಲೆಯಲ್ಲಿ ಕೇರಳದಾದ್ಯಂತ ಪ್ರತಿಭಟನೆ ಮುಂದುವರಿದಿದೆ.

- Advertisement -

ಸಂಘಪರಿವಾರದ ಪಿತೂರಿಯನ್ನು ಖಂಡಿಸಿ PFI ಸಂಘಟನೆಯ ಸಾವಿರಾರು ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಮುಷ್ಕರ ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ. ನಗರದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜನನಜೀವನ ಸಂಪೂರ್ಣ ಸ್ಥಬ್ದವಾಗಿದೆ.

Join Whatsapp