Home ಟಾಪ್ ಸುದ್ದಿಗಳು ಜ್ಞಾನವಾಪಿ ಪ್ರಕರಣ: ಮುಸ್ಲಿಂ ಪರ ವಕೀಲ ಅಭಯನಾಥ್ ಯಾದವ್ ನಿಧನ

ಜ್ಞಾನವಾಪಿ ಪ್ರಕರಣ: ಮುಸ್ಲಿಂ ಪರ ವಕೀಲ ಅಭಯನಾಥ್ ಯಾದವ್ ನಿಧನ

ಲಕ್ನೊ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಸ್ಲಿಂ ಸಂಘಟನೆಗಳ ಪರವಾಗಿ ವಾದಿಸುತ್ತಿದ್ದ ಖ್ಯಾತ ವಕೀಲ ಅಭಯನಾಥ್ ಯಾದವ್   ಹೃದಯಾಘಾತದಿಂದ  ಮೃತಪಟ್ಟಿದ್ದಾರೆ.

ಭಾನುವಾರದಿಂದಲೇ ಅಸ್ವಸ್ಥಗೊಂಡಿದ್ದ ಅವರಿಗೆ, ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಸಾಗಿಸುವ   ದಾರಿ ಮಧ್ಯೆಯೇ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಜ್ಞಾನವಾಪಿ ಕೇಸ್ ಇನ್ನೂ ವಾರಣಾಸಿ ಕೋರ್ಟ್ ನಲ್ಲಿ ನಡೆಯುತ್ತಿದ್ದು, ವಿಚಾರಣೆಗೆ ಸಂಬಂಧಿಸಿದಂತೆ   ಆಗಸ್ಟ್ 4ರಂದು ನ್ಯಾಯಾಲಯಕ್ಕೆ    ಅವರು ಹಾಜರಾಗಬೇಕಾಗಿತ್ತು.

ಅಭಯನಾಥ್ ಯಾದವ್ ಅವರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮುಸ್ಲಿಂ ಸಂಘಟನೆಗಳು ಭಾರಿ ಸಂತಾಪ ಸೂಚಿಸಿವೆ.

Join Whatsapp
Exit mobile version