Home ಟಾಪ್ ಸುದ್ದಿಗಳು ಗುರೂಜಿ ಹಂತಕ ಮಹಾಂತೇಶನಿಗೆ ಬಿಜೆಪಿ ನಂಟು: ನಾಯಕರೊಂದಿಗಿರುವ ಫೋಟೋ ವೈರಲ್

ಗುರೂಜಿ ಹಂತಕ ಮಹಾಂತೇಶನಿಗೆ ಬಿಜೆಪಿ ನಂಟು: ನಾಯಕರೊಂದಿಗಿರುವ ಫೋಟೋ ವೈರಲ್

ಬೆಂಗಳೂರು; ಐದು ಕೋಟಿಗೆ ಆಸ್ತಿಯೊಂದನ್ನು ಮಾರಿದ ವಿಚಾರಕ್ಕೆ ಸಂಬಂಧಿಸಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ ಮಾಡಿದ ಹಂತಕ ಮಹಾಂತೇಶ ಬಿಜೆಪಿಯೊಂದಿಗೆ ನಂಟು ಹೊಂದಿರುವುದನ್ನು ಸಾಬೀತುಪಡಿಸುವ ಹಲವು ಫೋಟೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗುರೂಜಿಯ ಬಹುತೇಕ ವ್ಯವಹಾರಗಳನ್ನು ಹಂತಕ ಮಹಾಂತೇಶ ಶಿರೂರು ನೋಡಿಕೊಳ್ಳುತ್ತಿದ್ದ. ಮಹಾಂತೇಶ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿಕೊಂಡಿದ್ದ ಎಂದು ತಿಳಿದು ಬಂದಿದೆ.

ಗೃಹಮಂತ್ರಿ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ , ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್,  ಪ್ರಮೋದ್ ಮುತಾಲಿಕ್ , ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಜೊತೆಗಿನ ಫೋಟೋಗಳು ಈಗ ವೈರಲ್ ಆಗುತ್ತಿದೆ.

Join Whatsapp
Exit mobile version