Home ಟಾಪ್ ಸುದ್ದಿಗಳು ಗುರುಗ್ರಾಮ: ಮಸೀದಿಗೆ ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದ ನೂರಾರು ಸಂಘಪರಿವಾರದ ಕಾರ್ಯಕರ್ತರು

ಗುರುಗ್ರಾಮ: ಮಸೀದಿಗೆ ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದ ನೂರಾರು ಸಂಘಪರಿವಾರದ ಕಾರ್ಯಕರ್ತರು

ಹರಿಯಾಣ: ರಾಜ್ಯದ ಗುರುಗ್ರಾಮದಲ್ಲಿರುವ ಭೋರ ಕಾಳನ್ ಎಂಬ ಊರೊಂದರ ಮಸೀದಿಗೆ ಏಕ ಕಾಲಕ್ಕೆ 200 ಕ್ಕೂ ಅಧಿಕ ಸಂಘಪರಿವಾರ ಕಾರ್ಯಕರ್ತರು ನುಗ್ಗಿ ದಾಂಧಲೆಯೆಬ್ಬಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬುಧವಾರ ರಾತ್ರಿ ಮಸೀದಿಯಲ್ಲಿ ಪ್ರಾರ್ಥಿಸುತ್ತಿದ್ದವರ ಮೇಲೆ ನೂರಾರು ಮಂದಿ ಹಲ್ಲೆ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಇಂದು ಅಲ್ಲಿನ ನಿವಾಸಿಯೊಬ್ಬರು ಪೊಲೀಸ್ ಮೆಟ್ಟಿಲು ಹತ್ತಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲ್ಲೆ ಮಾತ್ರವಲ್ಲ ಗ್ರಾಮದಿಂದ ತಮ್ಮನ್ನು ಉಚ್ಛಾಟನೆ ಮಾಡುವುದಾಗಿ ಮತ್ತು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version