Home ಟಾಪ್ ಸುದ್ದಿಗಳು ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ಗೆ ಸ್ಥಳೀಯರ ಆಕ್ಷೇಪ: ಅನುಮತಿ ಹಿಂಪಡೆದ ಜಿಲ್ಲಾಡಳಿತ

ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ಗೆ ಸ್ಥಳೀಯರ ಆಕ್ಷೇಪ: ಅನುಮತಿ ಹಿಂಪಡೆದ ಜಿಲ್ಲಾಡಳಿತ

ನವದೆಹಲಿ: ಹರ್ಯಾಣದ ಗುರ್ಗಾಂವ್ ನಲ್ಲಿ ಶುಕ್ರವಾರ ನಮಾಝ್ ಗೆ ಸ್ಥಳೀಯರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 8 ಕಡೆಗಳಲ್ಲಿ ನಮಾಝ್ ಗೆ ನೀಡಿದ ಅನುಮತಿಯನ್ನು ಮಂಗಳವಾರ ಜಿಲ್ಲಾಡಳಿತ ಹಿಂಪಡೆದಿದೆ.

ಗುರ್ಗಾಂ ನಿವಾಸಿಗಳು ಮತ್ತು ಆರ್.ಡಬ್ಲ್ಯೂ.ಎ ಆಕ್ಷೇಪ ವ್ಯಕ್ತಪಡಿಸಿದ ನಂತರ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಸ್ಪಷ್ಟಪಡಿಸಿದೆ.

ಜಿಲ್ಲಾಡಳಿತ ನೂತನ ಆದೇಶದನ್ವಯ ಬೆಂಗಾಲಿ ಬಸ್ತಿ, ಡಿ.ಎಲ್.ಎಫ್ -3 ವಿ ಬ್ಲಾಕ್, ಸೂರತ್ ಸಿಟಿ 1, ಖೇರ್ಕಿ ಮಜ್ರಾ ಗ್ರಾಮ, ದ್ವಾರಕಾ ಎಕ್ಸ್ ಪ್ರೆಸ್ ಬಳಿಯ ದೌಲತಾಬಾದ್ ಗ್ರಾಮ, ಸೆಕ್ಟರ್ 68 ರ ರಾಮಘಡ, ಡಿ.ಎಲ್.ಎಫ್ ಬಳಿಯ ಟವರ್ ಮತ್ತು ರಾಮಪುರ ಗ್ರಾಮ ಗ್ರಾಮದ ನಖ್ರೋಲಾ ರಸ್ತೆ ವರೆಗಿನ ಯಾವುದೇ ಸಾರ್ವಜನಿಕ ಮತ್ತು ತೆರೆದ ಸ್ಥಳದಲ್ಲಿ ನಮಾಝ್ ನಿರ್ವಹಣೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯವಾಗಲಿದೆ.

ಈ ಮಧ್ಯೆ ಯಾವುದೇ ಮಸೀದಿ, ಈದ್ಗಾ ಅಥವಾ ಖಾಸಗಿ ಮತ್ತು ನಿಗದಿಪಡಿಸಿದ ಸ್ಥಳದಲ್ಲಿ ನಮಾಝ್ ನೀಡಬಹುದು. ಸ್ಥಳೀಯರ ಆಕ್ಷೇಪಣೆ ವ್ಯಕ್ತಪಡಿಸಿದರೆ ಅಲ್ಲಿ ನಮಾಝ್ ನಿರ್ವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಕುರಿತು ಚರ್ಚೆ ನಡೆಸಲು ಮತ್ತು ನಮಾಝ್ ಮಾಡಲು ಸ್ಥಳಗಳನ್ನು ಗುರುತಿಸಲು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಹಾಯಕ ಪೊಲೀಸರು ಮತ್ತು ಧಾರ್ಮಿಕ ಸಂಘಟನೆ, ನಾಗರಿಕ ಸಾಮಾಜಿಕ ಸಂಘಟನೆಯ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ಡೆಪ್ಯುಟಿ ಕಮಿಷನರ್ ಯಶ್ ಗರ್ಗ್ ಅವರು ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ.

Join Whatsapp
Exit mobile version