ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ವತಿಯಿಂದ ಕಾರ್ಯಕರ್ತರ ಸಮಾವೇಶ | ಹೊಸ ಸದಸ್ಯರ ಸೇರ್ಪಡೆ ಅಭಿಯಾನ ಕಾರ್ಯಕ್ರಮ

Prasthutha|

ಬುರೈದ : ಇಂಡಿಯನ್ ಸೋಶಿಯಲ್ ಫೋರಮ್ ಬುರೈದ  ಬ್ಲಾಕ್ ಸಮಿತಿಯ ವತಿಯಿಂದ ಕಾರ್ಯಕರ್ತರ ಸಮಾವೇಶ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ದಿನಾಂಕ 04-12-2020 ರಂದು ಪಾಂಡಾ ಇಸ್ತಿರಾದಲ್ಲಿ ಅಬ್ಬಾಸ್ ಕುಕ್ಕುವಳ್ಳಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -

ಇಂಡಿಯನ್ ಸೋಶಿಯಲ್ ಫೋರಮ್ ಬುರೈದ  ಬ್ಲಾಕ್ ಸಮಿತಿಯ ಸದಸ್ಯರಾದ ಅಯಾಜ್ ಕಾಟಿಪಳ್ಳರವರು ಸೌದಿ ಅರೇಬಿಯಾದಲ್ಲಿ  ಸೋಶಿಯಲ್ ಫೋರಮ್ ಇದರ ಕಾರ್ಯವೈಖರಿ ಹಾಗೂ ಬಂದಂತಹ ಕಾರ್ಯಕರ್ತರಿಗೆ ಸಂಘಟನೆ ತತ್ವ ಸಿದ್ದಾಂತವನ್ನು ಮನವರಿಕೆ ಮಾಡಿಸಿದರು. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರನ್ನು ತಮ್ಮ ಸಂಘಟನೆಯ ಶಾಲು ಹೊದಿಸಿ ಬರ ಮಾಡಿಕೊಳ್ಳಲಾಯಿತು. 

ಇಂಡಿಯನ್  ಸೋಶಿಯಲ್ ಫೋರಮ್ ಬುರೈದ ಬ್ಲಾಕ್ ಇದರ ನೂತನ ಅಧ್ಯಕ್ಷರಾದ ರಶೀದ್ ಉಚ್ಚಿಲರವರು ಪ್ರಸಕ್ತ ಭಾರತದ ಪರಿಸ್ಥಿತಿ ಹಾಗೂ ತಮ್ಮ ಸಂಘಟನೆಯ ಅಗತ್ಯತೆಯ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು.

- Advertisement -

ಸಭೆ ಅಧ್ಯಕ್ಷತೆ ವಹಿಸಿದ್ದ ಅಬ್ಬಾಸ್ ಕುಕ್ಕುವಳ್ಳಿಯವರು ಮಾತನಾಡುತ್ತಾ, ಇಂಡಿಯನ್ ಸೋಶಿಯಲ್ ಫೋರಮ್ ತನ್ನ ಸಂಘಟನೆಯ ಉನ್ನತಿಗಾಗಿ ಎಲ್ಲಾ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ಸಮಾಜ ಸೇವೆ ಮಾಡುವುದರೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಸಬಹುದೆಂದು ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ  ಸಯೀದ್ ಪುಂಜಾಲಕಟ್ಟೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಯೂಬ್ ಉಪ್ಪಿನಂಗಡಿ ನಿರೂಪಿಸಿದರೆ, ಜಮಾಲ್ ಅಡ್ಡೂರು ರವರು ಧನ್ಯವಾದ ಸಮರ್ಪಿಸಿದರು.

Join Whatsapp