Home ಟಾಪ್ ಸುದ್ದಿಗಳು ಬಿಲ್ ಪಾವತಿಗೆ ಒತ್ತಾಯಿಸಿ ಮೃತದೇಹ ಹಸ್ತಾಂತರ ಮಾಡದೇ ಇರುವ ಆಸ್ಪತ್ರೆಗಳ ನೋಂದಣಿ ರದ್ದು: ರಾಜ್ಯ ಸರಕಾರ...

ಬಿಲ್ ಪಾವತಿಗೆ ಒತ್ತಾಯಿಸಿ ಮೃತದೇಹ ಹಸ್ತಾಂತರ ಮಾಡದೇ ಇರುವ ಆಸ್ಪತ್ರೆಗಳ ನೋಂದಣಿ ರದ್ದು: ರಾಜ್ಯ ಸರಕಾರ ಆದೇಶ

ಬೆಂಗಳೂರು : ಕೋವಿಡ್ ಸೋಂಕಿತರು ಮೃತಪಟ್ಟಲ್ಲಿ ಬಿಲ್ ಪಾವತಿಗೆ ಒತ್ತಾಯಿಸಿ ಮೃತದೇಹ ಹಸ್ತಾಂತರ ಮಾಡದೇ ಇರುವ ಆಸ್ಪತ್ರೆಗಳ ನೋಂದಣಿ ರದ್ದುಮಾಡುವುದಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.


ರಾಜ್ಯದಲ್ಲಿ ಅನೇಕ ಖಾಸಾಗಿ ಆಸ್ಪತ್ರೆಗಳು ಕೋವಿಡ್ ಬಾಧಿತರಾಗಿ ಮೃತಪಟ್ಟರೆ ಬಾಕಿ ಉಳಿದ ಬಿಲ್ ಮೊತ್ತವನ್ನು ಪಾವತಿ ಮಾಡದೆ ಮೃತದೇಹವನ್ನು ಹಸ್ತಾಂತರಿಸಲು ನಿರಾಕರಿಸುತ್ತಿದ್ದು , ಈ ಬಗ್ಗೆ ಮೃತರ ಸಂಬಂಧಿಕರು ಕಾನೂನು ಮೊರೆ ಹೋಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಇಂತಹ ವರದಿಗಳು ಪುನರಾವರ್ತಿಸಿದರೆ ಆಸ್ಪತ್ತೆಗಳ ನೋಂದಣಿಯನ್ನು ರದ್ದು ಮಾಡುವುದಾಗಿ ಆದೇಶಿಸಿದೆ. ಈ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ಕಾರ್ಯಪ್ರವೃತ್ತಗೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ವಾರಕ್ಕೆ ಒಂದು ಬಾರಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ಆದೇಶ ನೀಡಿದೆ.

Join Whatsapp
Exit mobile version