ಸರಕಾರದ ಕೋವಿಡ್ ನಿಯಂತ್ರಣ ಜಾಹಿರಾತಿನಲ್ಲಿ ಸಿಂಹಪಾಲು ಪಡೆದ ಕನ್ನಡ ಪತ್ರಿಕೆಗಳು ಯಾವುದು ಗೊತ್ತಾ !

Prasthutha|

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರವು ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ನಾಲ್ಕು ಪುಟಗಳ ಪ್ರಾಯೋಜಿತ ಜಾಹಿರಾತಿಗಾಗಿ 2020 ರಲ್ಲಿ  ಒಟ್ಟು 1.60 ಕೋಟಿ  ರು.ಗಳ ಬೃಹತ್ ಮೊತ್ತವನ್ನು ವೆಚ್ಚ ಮಾಡಿದೆ. ಈ ಪಟ್ಟಿಯಲ್ಲಿ ಹೊಸ ದಿಗಂತ ಪತ್ರಿಕೆ ಅತೀ ಹೆಚ್ಚು ಮೊತ್ತದ ಜಾಹಿರಾತು ಪಡೆದಿದೆ ಎಂದು ತಿಳಿದು ಬಂದಿದೆ.

- Advertisement -

ಈ ಪ್ರಾಯೋಜಿತ ಪುರವಣಿಗಳು 2020 ರ ಜುಲೈ 25ರಿಂದ ಜುಲೈ 27ರ ಅವಧಿಯಲ್ಲಿ ಪ್ರಕಟಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಾರ್ಯಾದೇಶ ನೀಡಿತ್ತು. ಈ ಅವಧಿಯಲ್ಲಿ ಸರ್ಕಾರದ ಅಂಗೀಕೃತ ಏಜೆನ್ಸಿಗಳಿಗೆ ಜಾಹೀರಾತು ಬಿಡುಗಡೆ ಮಾಡದ ಸರ್ಕಾರವು ನೇರವಾಗಿ ಪತ್ರಿಕೆಗಳಿಗೆ ಕಾರ್ಯಾದೇಶ ನೀಡಿತ್ತು ಎಂದು ತಿಳಿದು ಬಂದಿದೆ.

ವಿವಿಧ ಪತ್ರಿಕೆಗಳಿಗೆ ನೀಡಿದ ಜಾಹಿರಾತು ವಿವರ ಈ ಕೆಳಗಿನಂತಿದೆ :

- Advertisement -

ಹೊಸ ದಿಗಂತ ಕನ್ನಡ ಡೈಲಿ (ಹೊಸ ದಿಗಂತ)  23, 73, 840 ರು.

ವಿ ಆರ್‌ ಎಲ್‌ ಮೀಡಿಯಾ ಪ್ರೈವೈಟ್‌ ಲಿಮಿಟೆಡ್‌ (ವಿಜಯವಾಣಿ) – 19, 73, 915 ರು.

ಬೆನೆಟ್‌ ಅಂಡ್‌ ಕೋಲ್ಮನ್‌ ಕಂಪನಿ ಲಿಮಿಟೆಡ್‌ – 15, 21, 589 ರು.

ದಿ ಪ್ರಿಂಟರ್ಸ್ (ಮೈಸೂರು) ಪ್ರೈ ಲಿ (ಪ್ರಜಾವಾಣಿ) – 14, 85, 043 ರು.

 ಮೆಟ್ರೋಪಾಲಿಟಿನ್‌ ಮೀಡಿಯಾ ಕಂಪನಿ ಲಿಮಿಟೆಡ್‌ (ವಿಜಯಕರ್ನಾಟಕ )  13, 36, 474 ರು

ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌  (ಉದಯವಾಣಿ)  – 9, 68, 675 ರು.

 ದಿ ಪಬ್ಲಿಷಿಂಗ್‌ ಪ್ರೈವೈಟ್‌ ಲಿಮಿಟೆಡ್‌ ( ದಿ ಹಿಂದೂ) 9, 03, 876 ರು

 ಲೋಕ ಶಿಕ್ಷಣ ಟ್ರಸ್ಟ್‌, ಬೆಂಗಳೂರು (ಸಂಯುಕ್ತ ಕರ್ನಾಟಕ) 8, 23, 329 ರು.

ಕನ್ನಡ ಪ್ರಭ ಪಬ್ಲಿಕೇಷನ್ಸ್‌ ಲಿಮಿಟೆಡ್‌ (ಕನ್ನಡ ಪ್ರಭ) 7, 91, 280 ರು.

ವಿಶ್ವವಾಣಿ ಕನ್ನಡ ದಿನಪತ್ರಿಕೆ – 7, 91, 280 ರು.

 ದಿ ಪ್ರಿಂಟರ್ಸ್ (ಮೈಸೂರು ) ಪ್ರೈ ಲಿ (ಡೆಕ್ಕನ್‌ ಹೆರಾಲ್ಡ್‌) – 7, 87, 878 ರು.

ಎಕ್ಸ್‌ಪ್ರೆಸ್‌ ಪಬ್ಲಿಕೇಷನ್ಸ್‌ (ಮಧುರೈ) ಪ್ರೈ ಲಿ (ಇಂಡಿಯನ್‌ ಎಕ್ಸ್‌ಪ್ರೆಸ್‌ ) – 4, 73, 760 ರು

ಕರ್ನಾಟಕ ನ್ಯೂಸ್‌ ಪ್ಲಬಿಕೇಷನ್ಸ್‌ ಪ್ರೈ ಲಿ (ಸಂಜೆವಾಣಿ) – 3, 72, 960 ರು.

ಈ ಸಂಜೆ – 3, 72, 960 ರು.

ಆಂದೋಲನ ಪ್ರಿಂಟರ್ಸ್‌ ಪಬ್ಲಿಷರ್ಸ್ ಮೈಸೂರು – 3, 72, 960 ರು.

ಅಕಾಡೆಮಿ ನ್ಯೂಸ್‌ ಪೇಪರ್ರ್ಸ್ ಪ್ರೈವೈಟ್‌ ಲಿ (ಮೈಸೂರು ಮಿತ್ರ) – 3, 72, 960 ರು.

 ವಾರ್ತಾ ಭಾರತಿ ಕನ್ನಡ ದಿನ ಪತ್ರಿಕೆ – 2, 19, 870 ರು.

ಅಕಾಡೆಮಿ ನ್ಯೂಸ್‌ ಪೇಪರ್ರ್ಸ್ ಪ್ರೈ ಲಿ (ಸ್ಟಾರ್‌ ಆಫ್‌ ಮೈಸೂರ್‌) – 1, 14, 620 ರು.

ಇವಿಷ್ಟೇ ಅಲ್ಲದೆ  ಸರಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ನೀಡಿದ್ದ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದೆ. ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ.

ಕೊರೋನಾ ಸಾಂಕ್ರಮಿಕ ಹಿನ್ನಲೆಯಲ್ಲಿ ತೀವ್ರವಾಗಿ ತತ್ತರಿಸಿ ಪಾಡು ಪಡುತ್ತಿರುವ  ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಜನರ ದುಡ್ಡನ್ನು ಬೇಕಾ ಬಿಟ್ಟಿ ಜಾಹೀರಾತಿಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

Join Whatsapp