Home ಟಾಪ್ ಸುದ್ದಿಗಳು ನನ್ನಂತೆ ನರಳುವ ಶಿಕ್ಷೆ ಕಿರಾತಕನಿಗೆ ಕೊಡಿ: ಆ್ಯಸಿಡ್ ಸಂತ್ರಸ್ತೆಯ ಆಕ್ರೋಶ

ನನ್ನಂತೆ ನರಳುವ ಶಿಕ್ಷೆ ಕಿರಾತಕನಿಗೆ ಕೊಡಿ: ಆ್ಯಸಿಡ್ ಸಂತ್ರಸ್ತೆಯ ಆಕ್ರೋಶ

ಬೆಂಗಳೂರು: ನನ್ನಂತೆ ನರಳುವ ಶಿಕ್ಷೆ ಕಿರಾತಕನಿಗೆ ಕೊಡಿ ಎಂದು ಆ್ಯಸಿಡ್ ಸಂತ್ರಸ್ತೆ ಆರೋಪಿ ನಾಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆಸಿಡ್ ದಾಳಿಗೊಳಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಆರೋಪಿ ನಾಗೇಶ್ ಬಂಧನದ ಸುದ್ದಿ ತಿಳಿಸಿದಾಗ ಆಕೆ ಮೇಲಿನಂತೆ ಪ್ರತಿಕ್ರಿಯಿಸಿದ್ದಾಳೆ.
ನಾನು ನೋವಿನಲ್ಲಿ ನರಳುವಂತೆ ಅವನು ನರಳಬೇಕು ಎಂದು ಯುವತಿ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾಳೆ.
ನಾಗೇಶ್ ನನ್ನು ಬಂಧಿಸಲಾಗಿದೆ ಎಂದು ತಿಳಿಸಿದಾಗ ನೋವಿನಲ್ಲೂ ಕಿರಾತಕನಿಗೆ ಶಿಕ್ಷೆ ಆಗಬೇಕು ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಇನ್ನೂ ದಾಳಿಕೋರ ನಾಗೇಶ್ ಗೆ ಚಿತ್ರಹಿಂಸೆ ಯಾಗುವ ಶಿಕ್ಷೆ ಆಗಬೇಕು ಎಂದು ಸಂತ್ರಸ್ತ ಯುವತಿಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ.


ಕೃತ್ಯ ನಡೆಸಿ16 ದಿನಗಳ ಬಳಿಕ ನಾಗೇಶ್ ಪೊಲೀಸರಿಗೆ ಸಿಕ್ಕಿಬಿದ್ದಿರುವುದಕ್ಕೆ ಪ್ರತಿಕ್ರಿಯಿಸಿರುವ ಕುಟುಂಬಸ್ಥರು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.
ಯುವತಿಯ ದೊಡ್ಡಮ್ಮ ಮಾತನಾಡಿ, ಚಾಮುಂಡಿ ಮಹಿಷಾಸುರನ ಕೊಂದ ಹಾಗೆ ಆ್ಯಸಿಡ್ ನಾಗನನ್ನು ಕೊಲ್ಲಬೇಕು. ಒಂದೇ ಸಲ ಸಾಯಿಸಬೇಡಿ, ನಮ್ಮ ಮಗಳ ನೋವು ಅವನಿಗೂ ಗೊತ್ತಾಗಬೇಕು. ಅವನಿಗೆ ಕ್ರೂರಾತೀ ಕ್ರೂರ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು.

Join Whatsapp
Exit mobile version