ಗೌರಿ ಲಂಕೇಶ್ ಕೊಲೆ ಆರೋಪಿಗಳಿಗೆ ಜಾಮೀನು

Prasthutha|

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.

- Advertisement -


ಎ5 ಅಮಿತ್ ದಿಗ್ವೇಕರ್, ಎ17 ಕೆ.ಟಿ.ನವೀನ್ ಕುಮಾರ್, ಎ7 ಹೆಚ್.ಎಲ್.ಸುರೇಶ್ ಗೆ ಜಾಮೀನು ನೀಡಿ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಆರೋಪಿಗಳ ಪರ ಅರುಣ್ ಶ್ಯಾಮ್, ಮಧುಕರ್ ದೇಶಪಾಂಡೆ, ಬಸವರಾಜ ಸಪ್ಪಣ್ಣವರ್ ವಾದ ಮಂಡಿಸಿ, ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೇ ದೀರ್ಘ ಕಾಲ ಜೈಲಿನಲ್ಲಿಡುವಂತಿಲ್ಲವೆಂಬ ತೀರ್ಪು ಇದೆ. ವಾದ ಆಲಿಸಿದ ನ್ಯಾಯ ಪೀಠ ಆರೋಪಿಗಳು ಷರತ್ತುಬದ್ದ ಜಾಮೀನು ನೀಡಿದೆ. ಈ ಹಿಂದೆ ಎ-11 ಮೋಹನ್ ನಾಯಕ್ ಗೆ ಜಾಮೀನು ಮಂಜೂರಾಗಿತ್ತು.



Join Whatsapp
Exit mobile version