ಪೆರಿಯ ಅವಳಿ ಕೊಲೆ ಪ್ರಕರಣ | ಸಿಪಿಎಂ ಮಾಜಿ ಶಾಸಕ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

Prasthutha|

ಕೇರಳ: ದೇಶಾದ್ಯಂತ ಸುದ್ದಿಯಾಗಿದ್ದ ಪೆರಿಯ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಮಾಜಿ ಶಾಸಕ ಕೆ. ವಿ. ಕುಞ ರಾಮನ್ ಸೇರಿದಂತೆ ನಾಲ್ವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

- Advertisement -

ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದುಮ ಮಾಜಿ ಶಾಸಕ ಕೆ. ವಿ. ಕುಞ ರಾಮನ್, ಸಿಪಿಎಂ ಪಾಕಂ ಸಮಿತಿ ಕಾರ್ಯದರ್ಶಿ ರಾಘವನ್ ವೆಳ್ಳತ್ತೋಳಿ , ಗೋಪಾಲ್ , ಸಂದೀಪ್ ವೆಳ್ಳತ್ತೋಳಿ , ಭಾಸ್ಕರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಬುಧವಾರ ಐವರು ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಬಳಿಕ ಸಿಬಿಐ ಹತ್ತು ಮಂದಿಯನ್ನು ಬಂಧಿಸಿದ್ದು , ಈ ಹಿಂದೆ ಕ್ರೈಂ ಬ್ರಾಂಚ್ ೧೪ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಒಟ್ಟು ಈ ಅವಳಿ ಕೊಲೆ ಘಟನೆಯಲ್ಲಿ 24 ಮಂದಿ ಆರೋಪಿಗಳ ವಿರುದ್ಧ ಪ್ರಕರನ ದಾಖಲಾಗಿದೆ.

Join Whatsapp