ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿ ನಾಲ್ವರು ಮೃತ್ಯು

Prasthutha|

ಇಂದೋರ್: ಮಧ್ಯಪ್ರದೇಶದ ಕಟ್ನಿಯಲ್ಲಿನ ಬಾವಿಯೊಂದರಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಆರಂಭದಲ್ಲಿ ರಾಮ್ ಭಯ್ಯಾ ದುಬೆ (36) ನೀರಿನ ಪಂಪ್ ಅನ್ನು ಅಳವಡಿಸಲು ಬಾವಿಯೊಳಗೆ ಇಳಿದಿದ್ದರು. ಬಳಿಕ ಕೆಲವೇ ಹೊತ್ತಿನಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಇದನ್ನು ಕಂಡು ರಾಮ್ ಅವರ ಸೋದರಳಿಯ ಕೂಡ ಬಾವಿಗೆ ಇಳಿದಿದ್ದ. ಆದರೆ, ಆತ ಕೂಡ ಅಸ್ವಸ್ಥನಾಗಿದ್ದ ಎಂದು ಅವರು ಹೇಳಿದ್ದಾರೆ.


ರಾಮ್ ಭಯ್ಯಾ ಮತ್ತು ಅವರ ಸೋದರಳಿಯ ಕಾಣಿಸದೆ ಇದ್ದಾಗ ಸ್ಥಳದಲ್ಲಿದ್ದ ರಾಜೇಶ್ ಕುಶ್ವಾಹ (30) ಮತ್ತು ಪಿಂಟೂ ಕುಶ್ವಾಹ ಬಾವಿಗೆ ಇಳಿದಿದ್ದರು. ಆದರೆ, ಎಲ್ಲರೂ ಪ್ರಜ್ಞಾಹೀನರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಘಟನಾ ಸ್ಥಳಕ್ಕೆ ಉಮಾರಿಯಾ ಜಿಲ್ಲೆಯಿಂದ ಗಣಿ ತಜ್ಞರ ತಂಡವನ್ನು ಕರೆಸಲಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಾವಿಯೊಳಗೆ ಮೂರು ರೀತಿಯ ವಿಷಕಾರಿ ಅನಿಲಗಳು ಹೊರಹೊಮ್ಮುತ್ತಿವೆ ಎಂದು ಗಣಿ ತಜ್ಞರು ತಿಳಿಸಿದ್ದಾರೆ.



Join Whatsapp
Exit mobile version