Home ಟಾಪ್ ಸುದ್ದಿಗಳು ಯುವಕರ ನಿರುದ್ಯೋಗ ಸಮಸ್ಯೆಗೆ ಡಿಕೆಶಿಯ ಪರಿಹಾರ !

ಯುವಕರ ನಿರುದ್ಯೋಗ ಸಮಸ್ಯೆಗೆ ಡಿಕೆಶಿಯ ಪರಿಹಾರ !

ಬೆಂಗಳೂರು: ಭಾರತದಲಿ ಪೆಟ್ರೋಲ್ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಯ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವ್ಯಂಗ್ಯವಾಗಿ ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿದ ಅವರು, ನಿರುದ್ಯೋಗ ನಿವಾರಣೆಗೊಂದು ಉಪಾಯವಿದೆ, ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವುದನ್ನು ನೋಡುತ್ತಿದ್ದೀರಿ. ಹಾಗಾಗಿ, ಇವತ್ತು ಪೆಟ್ರೋಲ್ ಕೊಂಡು, ಸ್ವಲ್ಪ ದಿನಗಳ ನಂತರ ಮಾರಾಟ ಮಾಡಿದರೆ ನಿಮಗೆ ಲಾಭವಾಗಬಹುದು. ಮುಂದೊಂದು ದಿನ ಪೆಟ್ರೋಲ್ ಬೆಲೆ 200 ರೂಪಾಯಿ ತಲುಪಿದರೆ ನಿಮ್ಮ ಜೇಬಲ್ಲಿ ಎಷ್ಟು ಹಣ ಇರಬಹುದು ನೀವೇ ಊಹಿಸಿ ಎಂದು ಬರೆದಿದ್ದಾರೆ.

Join Whatsapp
Exit mobile version