Home ಟಾಪ್ ಸುದ್ದಿಗಳು ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು

ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು

ತುಮಕೂರು: ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಗುಬ್ಬಿಯ ಕಡಬಾ ಕೆರೆಯಲ್ಲಿ ನಡೆದಿದೆ.

ಮೃತರನ್ನು ಹರೀಶ್ (31) ಯೋಗೀಶ್ (36) ಎಂದು ಗುರುತಿಸಲಾಗಿದೆ. ಆಡುಗೊಂಡನಹಳ್ಳಿ ನಿವಾಸಿಗಳಾದ ಇಬ್ಬರು ಶನಿವಾರ ರಾತ್ರಿ ವೇಳೆ ಕಡಬಾ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ರಾತ್ರಿ ವೇಳೆ ವಿಪರೀತ ಮಳೆಯಾಗಿದ್ದು ಕೆರೆಯ ನೀರಿನ ಮಟ್ಟ ಅರಿಯದೆ ಮುಳುಗಿ ಹೋಗಿದ್ದಾರೆ. ಮನೆಗೆ ವಾಪಸ್ ಆಗದ ಕಾರಣ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು ಕೆರೆ ಬಳಿ ಬಂದು ನೋಡಿದಾಗ ಇಬ್ಬರು ಮುಳುಗಿರುವುದು ಖಾತ್ರಿಯಾಗಿದೆ.

Join Whatsapp
Exit mobile version