Home ಕರಾವಳಿ ಮುಸ್ಲಿಮರ ನರಮೇಧಕ್ಕೆ ಕರೆ: ಫೆಡರಲ್ ಬ್ಯಾಂಕ್ ಅಧಿಕಾರಿ ವಿಷ್ಣು ಪ್ರಸಾದ್ ವಿರುದ್ಧ FIR ದಾಖಲು

ಮುಸ್ಲಿಮರ ನರಮೇಧಕ್ಕೆ ಕರೆ: ಫೆಡರಲ್ ಬ್ಯಾಂಕ್ ಅಧಿಕಾರಿ ವಿಷ್ಣು ಪ್ರಸಾದ್ ವಿರುದ್ಧ FIR ದಾಖಲು

ವಿಟ್ಲ: ಇತ್ತೀಚೆಗೆ ಸಾಲೆತ್ತೂರಿನ ವರನೊಬ್ಬ ಧರಿಸಿದ್ದ ವೇಷ ಭೂಷಣಕ್ಕೆ ಸಂಬಂಧಪಟ್ಟಂತೆ ವಿವಾದವೆದ್ದಿತ್ತು. ಈ ಘಟನೆಯನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಉಲ್ಲೇಖಿಸುವಾಗ ಫೆಡರಲ್ ಬ್ಯಾಂಕಿನ ಅಧಿಕಾರಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬಾತ ಮಂಗಳೂರಿನಲ್ಲೂ ಗುಜರಾತ್ ಮಾದರಿಯಂತೆ ಮುಸ್ಲಿಮರ ನರಮೇಧ ನಡೆಸಬೇಕು. ಹಾಗಾದರೆ ಮಾತ್ರ ಅವರು ಪಾಠ ಕಲಿಯಲಿದ್ದಾರೆ ಎಂಬರ್ಥ ಬರುವ ರೀತಿಯಲ್ಲಿ ಪೋಸ್ಟ್ ಹಾಕಿದ್ದ. ಈ ಕುರಿತು ಪಿ ಎಫ್ ಐ ಸಂಘಟನೆ ವಿಟ್ಲ ಪೊಲೀಸ್  ಠಾಣೆಯಲ್ಲಿ ನೀಡಿದ್ದ ದೂರಿನ ಆಧಾರದಲ್ಲಿ ಇದೀಗ ಎಫ್ ಐ ಆರ್ ದಾಖಲಾಗಿದೆ.

ಬಂಟ್ವಾಳ ಪೊಲೀಸರು ಐಪಿಸಿ ಕಲಂ ಸಂಖ್ಯೆ 505(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಜಾಮೀನು ಸಿಗುವ ಕಲಂ ಆಗಿದೆ.

ಆರೋಪಿಯ ಕುಕೃತ್ಯದ ವಿರುದ್ಧ ಟ್ವಿಟ್ಟರಿನಲ್ಲೂ ಬಳಕೆದಾರರು ಫೆಡರಲ್ ಬ್ಯಾಂಕಿನ ಗಮನಕ್ಕೆ ತಂದಿದ್ದು, ಬ್ಯಾಂಕ್ ಕೂಡಾ ಆತನ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿತ್ತು.

Join Whatsapp
Exit mobile version