ಜೈ ಶ್ರೀರಾಮ್ ಎನ್ನಲು ತಾಕತ್ತಿದ್ದವರು ಮಾತ್ರ ದೇವಸ್ಥಾನದ ಹೊರಭಾಗದಲ್ಲಿ ಅಂಗಡಿ ಹಾಕಿ ಎಂದ ಮಧುಗಿರಿ ಮೋದಿ ವಿರುದ್ಧ FIR ದಾಖಲು

Prasthutha|

ಕೊಪ್ಪಳ : ಗಲಭೆಗೆ ಪ್ರಚೋದನೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತ ಮಧುಗಿರಿ ಮೋದಿ ವಿರುದ್ಧ ಇದೀಗ FIR ದಾಖಲಾಗಿದೆ. ಕೋಮು ಗಲಭೆ ಸೃಷ್ಟಿಸಲು ಯತ್ನಿಸಿರುವ ಆರೋಪದಡಿ ಗಂಗಾವತಿ ತಹಶೀಲ್ದಾರ್ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

- Advertisement -


ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸುಪ್ರಸಿದ್ಧ ಅಂಜನಾದ್ರಿ ಪರ್ವತದಲ್ಲಿ ಕೋಮು ಪ್ರಚೋದಿತ ಹೇಳಿಕೆ ನೀಡಿದ್ದ ಮಧುಗಿರಿ ಮೋದಿ, ಅನ್ಯಧರ್ಮೀಯರ ಅಂಗಡಿಗಳು ಇಲ್ಲಿ ಇರಬಾರದು, ತಾಕತ್ತಿದ್ದರೆ ನೀವು ಜೈ ಶ್ರೀರಾಂ ಹೇಳಬೇಕು, ಆಂಜನೇಯನ ಫೋಟೋ ನಿಮ್ಮ ಅಂಗಡಿಗಳಲ್ಲಿ ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ದುಖಾನ್ ಎತ್ತುಕೊಂಡು ಹೋಗ್ತಾ ಇರಬೇಕು ಎಂದು ವಿವಾದಾತ್ಮಾಕ ಹೇಳಿಕೆ ನೀಡಿದ್ದ.

Join Whatsapp