ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಸಂಘಪರಿವಾರದ ಮುಖಂಡನ ವಿರುದ್ಧ ಎಫ್.ಐ.ಆರ್

Prasthutha|

ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದಬಳಕೆ ಮತ್ತು ನಾಥುರಾಮ್ ಗೋಡ್ಸೆಯನ್ನು ಹೊಗಳಿದ ಅರೋಪದಲ್ಲಿ ಸಂಘಪರಿವಾರದ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ಛತ್ತೀಸ್ ಗಢ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

- Advertisement -

ಡಿಸೆಂಬರ್ 26 ರಂದು ರಾಯ್ ಪುರದ ರಾವಣ ಭಟ ಮೈದಾನದಲ್ಲಿ ಎರಡು ದಿನಗಳ ‘ಧರ್ಮ ಸಂಸದ್ ’ ಸಮಾರೋಪದಲ್ಲಿ ಕಾಳಿಚರಣ್ ಎಂಬಾತ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದಬಳಕೆ ಬಳಸಿದ್ದ ಮತ್ತು ಹಿಂದೂ ರಕ್ಷಣೆಗಾಗಿ ಕಟ್ಟರ್ ಹಿಂದೂ ನಾಯಕನನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದ್ದನು.

ಈ ಮಧ್ಯೆ ಕಾಳಿಚರಣ್ ವಿವಾದಾತ್ಮಕ ಹೇಳಿಕೆಗೆ ಆಡಳಿತರೂಢ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದರು.

- Advertisement -

ಕಾಂಗ್ರೆಸ್ ಮುಖಂಡ ಪ್ರಮೋದಿ ದುಬೆ ಅವರು ನೀಡಿದ ದೂರಿನನ್ವಯ ಕಾಳಿಚರಣ್ ವಿರುದ್ಧ ಐಪಿಸಿ ಸೆಕ್ಷನ್ 505 (2), 294 ರ ಅಡಿಯಲ್ಲಿ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

Join Whatsapp