Home ಟಾಪ್ ಸುದ್ದಿಗಳು ರೈತರ ಕ್ರಾಂತಿ ವೇಳೆ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದ ಬಿಜೆಪಿ ನಂಟಿನ ನಟ ದೀಪ್ ಸಿದು...

ರೈತರ ಕ್ರಾಂತಿ ವೇಳೆ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದ ಬಿಜೆಪಿ ನಂಟಿನ ನಟ ದೀಪ್ ಸಿದು ವಿರುದ್ಧ FIR

ನವದೆಹಲಿ : ಗಣರಾಜ್ಯೋತ್ಸವ ದಿನದಂದು ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು ನಡೆಸಿದ ಟ್ರಾಕ್ಟರ್ ಪರೇಡ್ ವೇಳೆ ಕೆಂಪುಕೋಟೆಯಲ್ಲಿ ದಾಂಧಲೆ ನಡೆಸಿ, ಸಿಖ್ ಧ್ವಜ ಹಾರಿಸಿದ, ಬಿಜೆಪಿ ನಂಟಿರುವ ನಟ ದೀಪ್ ಸಿದು ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.

ದೀಪ್‌ ಸಿಧು ವಿರುದ್ಧ ಗಲಭೆಗೆ ಕುಮ್ಮಕ್ಕು ನೀಡುವ ಆರೋಪವಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಂಪು ಕೋಟೆ ಬಳಿ ನಡೆದ ದಾಂಧಲೆಯಲ್ಲಿ ದೀಪ್ ಸಿದು ಕೈವಾಡವಿದೆ ಎನ್ನಲಾಗಿದೆ.

ಬಿಜೆಪಿ ಸಂಸದ ಸನ್ನಿ ಡಿಯೋಲ್ ಚುನಾವಣಾ ಪ್ರಚಾರ ಮ್ಯಾನೇಜರ್ ಆಗಿದ್ದ ದೀಪ್ ಸಿದು, ಹಲವು ಬಿಜೆಪಿ ನಾಯಕರೊಂದಿಗೆ ಆಪ್ತವಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಕೆಂಪುಕೋಟೆ ಬಳಿ ದೀಪ್ ಸಿದು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿ, ಗುಂಪನ್ನು ಕೆಂಪು ಕೋಟೆಗೆ ಕರೆದೊಯ್ದರು ಎಂದು ರೈತ ಸಂಘಟನಗೆಳು ಆರೋಪಿಸಿವೆ. ಈ ಎಲ್ಲ ಆರೋಪಗಳ ನಡುವೆ ನಟ ದೀಪ್‌ ಸಿದುನಾಪತ್ತೆಯಾಗಿದ್ದಾರೆ. ಸದ್ಯ ಆತನ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version