Home ಟಾಪ್ ಸುದ್ದಿಗಳು ತಂದೆ ಆತ್ಮಹತ್ಯೆ: ನೊಂದ ಮಗ ನೇಣಿಗೆ ಶರಣು

ತಂದೆ ಆತ್ಮಹತ್ಯೆ: ನೊಂದ ಮಗ ನೇಣಿಗೆ ಶರಣು

ಮೈಸೂರು: ತಂದೆಯು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದ ಮಗ ನೇಣಿಗೆ ಶರಣಾಗಿರುವ ದಾರುಣ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಜಕ್ಕಳ್ಳಿ ಕಾಲೋನಿಯಲ್ಲಿ ನಡೆದಿದೆ.


ಜಕ್ಕಳ್ಳಿಯ ತಂದೆ ನಾಗೇಗೌಡ (55), ಮಗ ಮಧು(24) ಆತ್ಮಹತ್ಯೆ ಮಾಡಿಕೊಂಡವರು.


ಮನೆಯಲ್ಲಿ ತಂದೆ ನಾಗೇಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಚಾರ ತಿಳಿದು ಅಘಾತಗೊಂಡ ಮಗ ಮಧು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version