ಜಮ್ಮು-ಕಾಶ್ಮೀರ | ಫಾರೂಕ್ ಅಬ್ದುಲ್ಲಾಗೆ ಮೀಲಾದುನ್ನಬಿ ಪ್ರಾರ್ಥನೆಗೆ ತಡೆ | ಆಡಳಿತದ ವಿರುದ್ಧ ಆಕ್ರೋಶ

Prasthutha|

ಶ್ರೀನಗರ : ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರನ್ನು ಇಂದು ಶ್ರೀನಗರದ ಹಝರತ್ ಬಲ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಜಮ್ಮು-ಕಾಶ್ಮೀರ ಆಡಳಿತ ತಡೆಯೊಡ್ಡಿರುವ ಘಟನೆ ನಡೆದಿದೆ. ಮೀಲಾದುನ್ನಬಿ ಹಿನ್ನೆಲೆಯಲ್ಲಿ ಹಜರತ್ ಬಲ್ ಮಸೀದಿಯಲ್ಲಿ ಮಾಜಿ ಸಿಎಂಗೆ ಅಡ್ಡಿ ಪಡಿಸಲಾಗಿರುವುದನ್ನು ನ್ಯಾಶನಲ್ ಕಾನ್ಫರೆನ್ಸ್ ಟ್ವೀಟ್ ಮಾಡಿ ತಿಳಿಸಿದೆ.

- Advertisement -

ಪ್ರಾರ್ಥನೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿರುವುದನ್ನು ಖಂಡಿಸುತ್ತೇವೆ ಎಂದು ನ್ಯಾಶನಲ್ ಕಾನ್ಫರೆನ್ಸ್ ತನ್ನ ಟ್ವೀಟ್ ಮಾಡಿದೆ. ಅದರಲ್ಲೂ ಮೀಲಾದುನ್ನಬಿ ಸಂದರ್ಭ ಈ ರೀತಿ ಮಾಡಿರುವುದಕ್ಕೆ ಅದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಘಟನೆಯನ್ನು ಪಿಡಿಪಿ ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ಖಂಡಿಸಿದ್ದಾರೆ. ಇದು ತೀವ್ರ ಖಂಡನಾರ್ಹವಾದುದು ಮತ್ತು ನಮ್ಮ ಹಕ್ಕುಗಳ ಉಲ್ಲಂಘನೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.  

Join Whatsapp