Home ಟಾಪ್ ಸುದ್ದಿಗಳು ದೆಹಲಿ ಗಡಿಯಲ್ಲಿ ರೈತ ಪ್ರತಿಭಟನೆಯಲ್ಲಿ ಸೇರಿಕೊಳ್ಳಿ : ಕಾರ್ಯಕರ್ತರಿಗೆ ಅಕಾಲಿ ದಳ ಮನವಿ

ದೆಹಲಿ ಗಡಿಯಲ್ಲಿ ರೈತ ಪ್ರತಿಭಟನೆಯಲ್ಲಿ ಸೇರಿಕೊಳ್ಳಿ : ಕಾರ್ಯಕರ್ತರಿಗೆ ಅಕಾಲಿ ದಳ ಮನವಿ

ನವದೆಹಲಿ : ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ ಗಡಿಭಾಗಗಳಿಗೆ ತೆರಳಿ, ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ತನ್ನ ಕಾರ್ಯಕರ್ತರಿಗೆ ಶಿರೋಮಣಿ ಅಕಾಲಿ ದಳ ಮನವಿ ಮಾಡಿದೆ. ಸರಕಾರವು ದಮನಕಾರಿ ಮಾರ್ಗದಲ್ಲಿ ಹೋರಾಟವನ್ನು ಹತ್ತಿಕ್ಕಲು ನೋಡುತ್ತಿದೆ ಎಂದು ಪಕ್ಷವು ಆಪಾದಿಸಿದೆ.

ಉತ್ತರ ಪ್ರದೇಶ, ಹರ್ಯಾಣದ ಬಿಜೆಪಿ ಸರಕಾರಗಳ ಜೊತೆ ಸೇರಿ ಕೇಂದ್ರ ಸರಕಾರವು ಈ ರೈತ ಆಂದೋಲನವನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಅನ್ನದಾತನ ಧ್ವನಿ ಅಡಗಿಸುವ ಮತ್ತು 80 ಹುತಾತ್ಮರನ್ನು ಅವಮಾನಿಸುವ ಈ ಅಸಹ್ಯ ಕೃತ್ಯ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ನಾವು ತೋರಿಸಿ ಕೊಡಬೇಕಾಗಿದೆ ಎಂದು ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಹೇಳಿದ್ದಾರೆ.

Join Whatsapp
Exit mobile version