Home ಟಾಪ್ ಸುದ್ದಿಗಳು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ರೈತರ ಆಕ್ರೋಶಕ್ಕೆ ಬೆಚ್ಚಿಬಿದ್ದು ಓಡಿ ಹೋಗಿದ್ದ ಬಿಜೆಪಿ ಕಾರ್ಯಕರ್ತ ದೀಪ್...

ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ರೈತರ ಆಕ್ರೋಶಕ್ಕೆ ಬೆಚ್ಚಿಬಿದ್ದು ಓಡಿ ಹೋಗಿದ್ದ ಬಿಜೆಪಿ ಕಾರ್ಯಕರ್ತ ದೀಪ್ ಸಿದು | ವೀಡಿಯೊ ವೈರಲ್

ನವದೆಹಲಿ : ಗಣರಾಜ್ಯೋತ್ಸವ ದಿನ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಕೆಂಪುಕೋಟೆಯಲ್ಲಿ ದಾಂಧಲೆ ನಡೆಸಿ, ಸಿಖ್ ಧ್ವಜ ಹಾರಿಸಲು ಕುಮ್ಮಕ್ಕು ನೀಡಿದ್ದ ಬಿಜೆಪಿ ಕಾರ್ಯಕರ್ತ, ನಟ ದೀಪ್ ಸಿದು ವಿರುದ್ಧ ರೈತ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದ ಮತ್ತು ಈ ವೇಳೆ ಆತ ಸ್ಥಳದಿಂದ ಪರಾರಿಯಾದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಲು, ದಾಂಧಲೆ ನಡೆಸಲು ಪ್ರಚೋದನೆ ನೀಡುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಿದಾಡಿದ್ದವು. ಈ ನಡುವೆ, ಕೆಂಪುಕೋಟೆಯಲ್ಲಿ ಈತ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗುತ್ತಿರುವ ಮತ್ತು ಬಿಜೆಪಿ ವಿರುದ್ಧ ರೈತ ಪ್ರತಿಭಟನಕಾರರು ಘೋಷಣೆ ಕೂಗಿದಾಗ, ಈತ ಮೌನವಾಗಿರುತ್ತಿದ್ದ ವೀಡಿಯೊಗಳೂ ಲಭ್ಯವಾಗಿದ್ದವು.

ಇದೀಗ ಅದರ ಮುಂದುವರಿದ ಭಾಗವಾಗಿ, ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ ಬಳಿಕ ಪ್ರತಿಭಟನಕಾರರು ದೀಪ್ ಸಿದು ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಒಂದು ಟ್ರಾಕ್ಟರ್ ನಲ್ಲಿ ದೀಪ್ ಸಿದು ಕುಳಿತಿದ್ದು, ಆತ ಮಾಡಿರುವ ಕೆಲಸ ಸರಿಯಿಲ್ಲ ಎಂದು ಪ್ರತಿಭಟನಕಾರರು ಆತನಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆತ ಟ್ರಾಕ್ಟರ್ ನಿಂದ ತಪ್ಪಿಸಿಕೊಂಡು ಓಡಿದ್ದಾನೆ.

ಅದರ ಮುಂದುವರಿದ ಭಾಗವಾಗಿ, ಇನ್ನೊಂದು ವೀಡಿಯೊದಲ್ಲಿ ದೀಪ್ ಸಿದು ಓಡಿ ಹೋಗಿ ಬೈಕ್ ಒಂದನ್ನು ಹತ್ತಿ, ಸ್ಥಳದಿಂದ ಪರಾರಿಯಾಗುತ್ತಿರುವರೆನ್ನಲಾದ ವೀಡಿಯೊವೊಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊಗಳು ಈಗ ರೈತ ಹೋರಾಟದ ಮೇಲೆ ಕಪ್ಪುಚುಕ್ಕೆ ಬರುವಂತೆ ಮಾಡಿದ ಆರೋಪ ಹೊತ್ತಿರುವ ಬಿಜೆಪಿ ಬೆಂಬಲಿಗ ನಟ, ದೀಪ್ ಸಿದು ವರ್ತನೆ ಮೇಲೆ ಮತ್ತಷ್ಟು ಸಂದೇಹ ಮೂಡುವಂತೆ ಮಾಡಿವೆ.

ಇನ್ನೊಂದೆಡೆ, ದೀಪ್ ಸಿದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಸಂಸದ ಸನ್ನಿ ಡಿಯೊಲ್ ಜೊತೆಗಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ದೀಪ್ ಸಿದು ಸನ್ನಿ ಡಿಯೊಲ್ ಜೊತೆ ಬಿಜೆಪಿ ಚುನಾವಣಾ ಪ್ರಚಾರ ವಾಹನದಲ್ಲಿರುವ ಫೋಟೊ ಕೂಡ ವೈರಲ್ ಆಗಿದೆ. ನಟ ಧರ್ಮೇಂದ್ರ ಮತ್ತು ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಜೊತೆಗೂ ದೀಪ್ ಸಿದು ಇದ್ದ ಫೋಟೊಗಳೂ ವೈರಲ್ ಆಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೊಗಳು :

Join Whatsapp
Exit mobile version