Home ಟಾಪ್ ಸುದ್ದಿಗಳು ರೈತರ ಕ್ರಾಂತಿ | ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತ

ರೈತರ ಕ್ರಾಂತಿ | ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತ

ನವದೆಹಲಿ : ರೈತರ ಪ್ರತಿಭಟನೆ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾತ್ಮಕ ಸ್ವರೂಪಕ್ಕೆ ತಲುಪಿದ್ದು, ವದಂತಿಗಳು ಹರಡುವುದನ್ನು ತಪ್ಪಿಸಲು ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

ಕೆಂಪುಕೋಟೆಗೆ ಮುತ್ತಿಗೆ ಹಾಕಿರುವ ರೈತರು ಕೆಂಪುಕೋಟೆ ಹತ್ತಿ ದಾಂಧಲೆ ಮಾಡಿದ್ದಾರೆ. ಇನ್ನೊಂದೆಡೆ ಸಿಂಘು, ಟಿಕ್ತಿ, ಗಾಜಿಪುರ ಪ್ರದೇಶದಲ್ಲಿ ಇಂಟರ್ನೆಟ್ ರದ್ದುಗೊಳಿಸಲಾಗಿದೆ.

ಕೆಂಪುಕೋಟೆಯಲ್ಲಿ ರೈತರು ಗದ್ದಲ ನಡೆಸಿದ್ದಾರೆ. ಹಲವೆಡೆ ಲಾಠಿಚಾರ್ಜ್ ನಡೆಸಿದೆ. ಅಶ್ರುವಾಯು ಸಿಡಿಸಲಾಗಿದೆ.

Join Whatsapp
Exit mobile version