Home ಟಾಪ್ ಸುದ್ದಿಗಳು ಬೆಳಗಾವಿಯಲ್ಲೂ ರೈತರ ಟ್ರಾಕ್ಟರ್ ಕ್ರಾಂತಿ : ಸುವರ್ಣಸೌಧದ ಬಳಿ ಜಮಾವಣೆಗೊಂಡ ಅನ್ನದಾತರು

ಬೆಳಗಾವಿಯಲ್ಲೂ ರೈತರ ಟ್ರಾಕ್ಟರ್ ಕ್ರಾಂತಿ : ಸುವರ್ಣಸೌಧದ ಬಳಿ ಜಮಾವಣೆಗೊಂಡ ಅನ್ನದಾತರು

ಬೆಳಗಾವಿ : ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಬೆಳಗಾವಿಯಲ್ಲಿ ರೈತರೂ ಟ್ರಾಕ್ಟರ್ ಪರೇಡ್ ಮಾಡಲಿದ್ದಾರೆ. ರೈತ ನಾಯಕರು ಸುವರ್ಣ ವಿಧಾನಸೌಧದಿಂದ ಟ್ರಾಕ್ಟರ್ ಪರೇಡ್ ಮಾಡಲಿದ್ದಾರೆ.

ಕೇಂದ್ರ ಸರಕಾರ ನೂತನ ಕೃಷಿ ನೀತಿಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದಿಂದ ಜಿಲ್ಲಾ ಕ್ರೀಡಾಂಗಣದ ತನಕ ಟ್ರಾಕ್ಟರ್ ಪರೇಡ್ ನಡೆಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ರೈತರು ಮಾಡಿದ್ದಾರೆ.

ಬೆಳಗಾವಿ ನಗರಕ್ಕೆ ರೈತರು ರಾಮದುರ್ಗ, ಯರಗಟ್ಟಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ರಾತ್ರಿಯೇ ಆಗಮಿಸಿದ್ದಾರೆ. ರೈತರು ಜಮಾವಣೆಗೊಳ್ಳುತ್ತಿದ್ದಂತೆ ರೈತರ ಟ್ರಾಕ್ಟರ್ ಪರೇಡ್ ಗೆ ನೀಡಿದ್ದ ಅನುಮತಿಯನ್ನು ಪೊಲೀಸರು ವಾಪಾಸ್ ಪಡೆದಿದ್ದಾರೆ.

ರೈತರು ಸುವರ್ಣಸೌಧದತ್ತ ತೆರಳುತ್ತಿದ್ದಾರೆ. ಸುವರ್ಣಸೌಧರಿಂದ ಜಿಲ್ಲಾ ಕ್ರೀಡಾಂಗಣದ ತನಕ ಟ್ರಾಕ್ಟರ್ ಮೂಲಕ ಜಾಥಾ ನಡೆಸಿ ಕೇಂದ್ರ ಸರಕಾರದ ನೂತನ ಕೃಷಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲು ರೈತರು ತೀರ್ಮಾನಿಸಿದ್ದಾರೆ.

Join Whatsapp
Exit mobile version