Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ | ಅನ್ನದಾತನ ಕೂಗಿಗೆ ಸ್ಪಂಧಿಸದ ಬಿಜೆಪಿ ತೊರೆದ ಮಾಜಿ ಸಂಸದ ಹರಿಂದರ್ ಸಿಂಗ್

ರೈತರ ಪ್ರತಿಭಟನೆ | ಅನ್ನದಾತನ ಕೂಗಿಗೆ ಸ್ಪಂಧಿಸದ ಬಿಜೆಪಿ ತೊರೆದ ಮಾಜಿ ಸಂಸದ ಹರಿಂದರ್ ಸಿಂಗ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಆಪಾದಿಸಿ, ಮಾಜಿ ಸಂಸದ ಹರಿಂದರ್ ಸಿಂಗ್ ಖಾಲ್ಸಾ ಬಿಜೆಪಿ ತೊರೆದಿದ್ದಾರೆ.

73 ವರ್ಷದ ಹರಿಂದರ್ ಸಿಂಗ್ 2014ರಲ್ಲಿ ಫತೇರ್ ಗಡದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಆಂದೋಲನದಲ್ಲಿ ನಿರತವಾಗಿರುವ ರೈತರಿಗೆ ಬಿಜೆಪಿ ನಾಯಕತ್ವವರು ಸರಿಯಾದ ಸ್ಪಂದನೆ ತೋರುತ್ತಿಲ್ಲ ಎಂದು ಹರಿಂದರ್ ಸಿಂಗ್ ಆರೋಪಿಸಿದ್ದಾರೆ.

ರೈತರ ವಿರುದ್ಧ ವಿಭಿನ್ನ ನಿಲುವು ತಳೆದಿರುವುದರಿಂದ ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹರಿಂದರ್ ಸಿಂಗ್ ಹೇಳಿದ್ದಾರೆ. ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ಕೈಬಿಡುವಂತೆ ರೈತರು ಕಳೆದ ಒಂದು ತಿಂಗಳಿನಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Join Whatsapp
Exit mobile version