ರೈತ ಚಳವಳಿ | ಕಾನೂನು ಹಿಂಪಡೆಯದೆ, ಪ್ರತಿಭಟನೆ ಕೊನೆಗೊಳಿಸಲು ಸಾಧ್ಯವಿಲ್ಲ : ಬಿಕೆಯು ಮುಖಂಡ ರಾಕೇಶ್ ಟಿಕಾಯತ್

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯದೆ, ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಭಾರತೀಯ ಕಿಸಾನ್ ಸಂಘ ಮತ್ತೆ ಪುನರುಚ್ಚರಿಸಿದೆ.

- Advertisement -

ಸರಕಾರ ವಿಷಯ ಇತ್ಯರ್ಥಗೊಳಿಸುವ ಬದಲು, ಕೇವಲ ಪ್ರತಿಭಟನೆ ಕೊನೆಗೊಳಿಸುವುದರಲ್ಲಿ ಆಸಕ್ತವಾಗಿದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.  

“ಸರಕಾರ ಕಾನೂನನ್ನು ತಿದ್ದುಪಡಿ ಮಾಡಲು ಬಯಿಸಿದೆ. ಆದರೆ, ನಾವು ಈ ಕಾನೂನುಗಳನ್ನು ಹಿಂಪಡೆಯಬೇಕೆಂದು ಬಯಸಿದ್ದೇವೆ. ನಮಗೆ ಬದಲಾವಣೆ ಬೇಕಾಗಿಲ್ಲ. ಈ ಕಾನೂನುಗಳನ್ನು ಹಿಂದಕ್ಕೆ ಪಡೆದಾಗ ಮಾತ್ರ ನಾವು ಪ್ರತಿಭಟನೆ ಕೊನೆಗೊಳಿಸುತ್ತೇವೆ” ಎಂದು ಟಿಕಾಯತ್ ಹೇಳಿದ್ದಾರೆ.

- Advertisement -

ಪ್ರಧಾನಿ ಮೋದಿ ಸರಕಾರದ ವಿರುದ್ಧದ ರೈತರ ಪ್ರತಿಭಟನೆ ಇಂದಿಗೆ 15ನೇ ದಿನಕ್ಕೆ ಕಾಲಿಟ್ಟಿದೆ.

Join Whatsapp