ಕೊರೆವ ಚಳಿಯಲ್ಲಿ ರೈತರ ಪ್ರತಿಭಟನೆಯಲ್ಲಿ 10 ದಿನಗಳಿಂದ ಭಾಗಿಯಾಗಿದ್ದ ಯುವಕ ನಿಧನ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಕೊರೆವ ಚಳಿಯಲ್ಲಿ ಪ್ರತಿಭಟನೆ ನಿರತರಾಗಿರುವ ರೈತರ ಪೈಕಿ, ಹರ್ಯಾಣ ಮೂಲದ 32ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.

- Advertisement -

ಹರ್ಯಾಣದ ಸೋನಿಪತ್ ನಿವಾಸಿ ಅಜಯ್ ಮೋರೆ ಮೃತ ಯುವಕ. ಕಳೆದ 10 ದಿನಗಳಿಂದ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅಜಯ್ ಭಾಗಿಯಾಗಿದ್ದರು. ಲಘುಷ್ಣತೆಯಿಂದ ಅವರು ಸಾವಿಗೀಡಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೃಷಿ ನೀತಿಯನ್ನು ವಿರೋಧಿಸಿ ಕೊರೊನ ಸೋಂಕು ಹರಡುವ ಭೀತಿಯ ನಡುವೆ, ಕೊರೆವ ಚಳಿಯಲ್ಲೂ ಕಳೆದ ಕೆಲವು ದಿನಗಳಿಂದ ರೈತರು ಪ್ರತಿಭಟನೆ ನಿರತರಾಗಿದ್ದಾರೆ.

Join Whatsapp