ನಕಲಿ ಭಯೋತ್ಪಾದಕ ದಾಳಿ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ಬಂಧನ..!

Prasthutha|

ಶ್ರೀನಗರ, ಜು.19: ನಕಲಿ ಭಯೋತ್ಪಾದಕ ದಾಳಿಯ ಕತೆ ಕಟ್ಟಿದ್ದ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲಾ ಬಿಜೆಪಿ ಅಧ್ಯಕ್ಷನ ಪುತ್ರ ಹಾಗೂ ಪಕ್ಷದ ವಕ್ತಾರ ಸೇರಿದಂತೆ ಇಬ್ಬರನ್ನು ಶ್ರೀನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಇಶ್ಪಾಕ್ ಅಹ್ಮದ್ ಮೀರ್ ಎಂಬಾತನ ಕೈಗೆ ಗಾಯವಾಗಿತ್ತು. ಬಿಜೆಪಿಯ ವರಿಷ್ಠರ ಗಮನ ಸೆಳೆಯಲು ಹಾಗೂ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂಬುದಾಗಿ ಪ್ರಚಾರ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ.

ಅಷ್ಟೇ ಅಲ್ಲ ಈ ಪಿತೂರಿಯಲ್ಲಿ ಶಾಮೀಲಾಗಿದ್ದ ಕುಪ್ವಾರಾ ಜಿಲ್ಲಾ ಬಿಜೆಪಿ ವಕ್ತಾರ ಬಸರತ್ ಅಹ್ಮದ್ ನನ್ನು ಬಂಧಿಸಲಾಗಿದ್ದು. ನಕಲಿ ಭಯೋತ್ಪಾದಕ ದಾಳಿ ಎಂಬ ವಿಚಾರ ತಿಳಿಯುತ್ತಿದಂತೆ ಇಶ್ಪಾಕ್ ತಂದೆ ಕುಪ್ವಾರ ಬಿಜೆಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಶಫಿ ಎಂಬಾತನನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ.

- Advertisement -

ತನಿಖೆ ನಡೆಸಿದ ಪೊಲೀಸರು, ನಕಲಿ ಭಯೋತ್ಪಾದಕ ದಾಳಿ ಬಗ್ಗೆ ಮೊದಲೇ ಎಲ್ಲಾ ಸಿದ್ಧತೆ ರೂಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಇಶ್ಪಾಕ್ ಮೀರ್ ತೆರಳುತ್ತಿದ್ದ ಕಾರಿಗೆ ಪಹರೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಗನ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿತ್ತು. ಇದರಿಂದಾಗಿ ಇಶ್ಪಾಕ್ ಭುಜಕ್ಕೆ ಗಾಯವಾಗಿತ್ತು. ಆದರೆ ಇಶ್ಪಾಕ್ ಇದನ್ನು ಬಾಲಿವುಡ್ ಸಿನಿಮಾ ಮಾದರಿಯಲ್ಲಿ ಇದೊಂದು ಭಯೋತ್ಪಾದಕ ದಾಳಿ ಎಂಬಂತೆ ಬಿಂಬಿಸಲು ಕತೆ ಕಟ್ಟಿರುವುದಾಗಿ ವರದಿ ತಿಳಿಸಿದೆ.
ಪೊಲೀಸರ ವಿಚಾರಣೆ ವೇಳೆ ಇಶ್ಪಾಕ್ ಇದೊಂದು ಭಯೋತ್ಪಾದಕ ದಾಳಿ ಅಲ್ಲ ಎಂಬುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

Join Whatsapp